
ಬೆಳಗಾವಿ: ‘ಜಿಎಸ್ಟಿ ಎಂಬುದು ದೇಶದ ಆರ್ಥಿಕತೆಯ ದಿಕ್ಸೂಚಿ. ಅದರ ಇಳಿಕೆಯಿಂದ ಜನರಿಗೆ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮನೋಜ ಡೊಳ್ಳಿ ಅಭಿಪ್ರಾಯಪಟ್ಟರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ಜಿಎಸ್ಟಿ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಅರ್ಜುನ ಜಂಬಗಿ, ‘ದೇಶದ ಆರ್ಥಿಕ ವ್ಯವಸ್ಥೆ ನಿಂತಿರುವುದೇ ತೆರಿಗೆಗಳಿಂದ. ಆದರೆ, ತೆರಿಗೆಯು ಗ್ರಾಹಕರು ಮತ್ತು ಉದ್ಯಮಕ್ಕೆ ಪೂರಕವಾಗಿರಬೇಕು’ ಎಂದರು.
ಕುಮಾರ ಬಡಿಗೇರ ಉಪಸ್ಥಿತರಿದ್ದರು. ಮಾಶಿಹಾ ಮದರಖಂಡಿ ಸ್ವಾಗತಿಸಿದರು. ಫಜಿಲಾ ಪಠಾಣ ವಂದಿಸಿದರು. ಮೀನಾಜ್ ಉಮರಖಾನ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.