ADVERTISEMENT

ಬೆಳಗಾವಿ: ಆಕ್ಸಿಜನ್ ಸಿಲಿಂಡರ್‌ ಕೈಯಲ್ಲಿ ಹಿಡಿದು ಸಾಗಿಸಿದ ಯುವಕ!

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:41 IST
Last Updated 28 ಸೆಪ್ಟೆಂಬರ್ 2020, 14:41 IST
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಯುವಕನೊಬ್ಬ ಆಕ್ಸಿಜನ್ ಸಿಲಿಂಡರ್‌ ಎತ್ತಿಕೊಂಡು ಸಾಗಿಸಿದ
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಯುವಕನೊಬ್ಬ ಆಕ್ಸಿಜನ್ ಸಿಲಿಂಡರ್‌ ಎತ್ತಿಕೊಂಡು ಸಾಗಿಸಿದ   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ವಾಹನಗಳ ಸಂಚಾರಕ್ಕೆ ಪೊಲೀಸರು ಅವಕಾಶ ನೀಡದೆ ಇದ್ದಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಯುವಕನೊಬ್ಬ ವಾಹನ ತಡೆದಿದ್ದರಿಂದ, ಚಿಕ್ಕ ಆಕ್ಸಿಜನ್ ಸಿಲಿಂಡರ್ ಅನ್ನು ಕೈಯಲ್ಲೇ ಹಿಡಿದುಕೊಂಡು ಸಾಗಿಸಿದ ಘಟನೆ ನಡೆಯಿತು.

ಕಾಲೇಜು ರಸ್ತೆ ಕಡೆಯಿಂದ ಬಂದ ಯುವಕ, ಜಿಲ್ಲಾಧಿಕಾರಿ ಕಚೇರಿ ಕಡೆಗೆ ಧಾವಂತದಲ್ಲಿ ಸಿಲಿಂಡರ್‌ ಹಿಡಿದು ಓಡಿದ. ಆ ಯುವಕ ಯಾರು, ಎಲ್ಲಿಂದ ಬಂದಿದ್ದರು, ಸಿಲಿಂಡರ್‌ ಒಯ್ದಿದ್ದು ಎಲ್ಲಿಗೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT