ADVERTISEMENT

ಹುಕ್ಕೇರಿ: ಅಹಿಂಸಾ ಧರ್ಮ ಅಳವಡಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:34 IST
Last Updated 10 ಏಪ್ರಿಲ್ 2025, 13:34 IST
ಹುಕ್ಕೇರಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಮಹಾವೀರ ಜಯಂತಿಯಲ್ಲಿ ಮಹಾವೀರರ ಭಾವಚಿತ್ರಕ್ಕೆ ತಹಶೀಲ್ದಾರ್ ಮಂಜುಳಾ ನಾಯಕ್ ಪೂಜೆ ಸಲ್ಲಿಸಿದರು 
ಹುಕ್ಕೇರಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಮಹಾವೀರ ಜಯಂತಿಯಲ್ಲಿ ಮಹಾವೀರರ ಭಾವಚಿತ್ರಕ್ಕೆ ತಹಶೀಲ್ದಾರ್ ಮಂಜುಳಾ ನಾಯಕ್ ಪೂಜೆ ಸಲ್ಲಿಸಿದರು    

ಹುಕ್ಕೇರಿ: ಮಹಾವೀರರ ಅಂಹಿಸಾ ಧರ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಎಂದು ತಹಶೀಲ್ದಾರ್ ಮಂಜುಳಾ ನಾಯಕ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ತಾಲ್ಲೂಕು ಮಟ್ಟದ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಹಿರಿಯ ವಕೀಲ ಪಿ.ಆರ್.ಚೌಗಲಾ ಮಾತನಾಡಿದರು.

ಬಿಡುಗಡೆ: ಸಮಾಜದ ಮುಖಂಡರು ಮತ್ತು ತಹಶೀಲ್ದಾರ್ ನಾಯಕ್ ಅವರು ಮಹಾವೀರ ಕುರಿತ ರಚಿತ ‘ಹಳ್ಳಿ ಸಂದೇಶ’ ಗ್ರಂಥ ಬಿಡುಗಡೆ ಮಾಡಿದರು.

ADVERTISEMENT

ಮೆರವಣಿಗೆ: ತನ್ನಿಮಿತ್ತ ಜರುಗಿದ ಮೆರವಣಿಗೆಯಲ್ಲಿ ಜೈನ್ ತಾಲ್ಲೂಕು ಸಂಘದ ಅಧ್ಯಕ್ಷ ಬಾಹುಬಲಿ ನಾಗನೂರಿ, ಹಿರಿಯ ವಕೀಲ ಪಿ.ಆರ್.ಚೌಗಲಾ, ಸಂಜೀವ ಮಗದುಮ್ಮ, ರವೀಂದ್ರ ಚೌಗಲಾ, ಬಸ್ತವಾಡ ಸರ್, ಸುಭಾಸ ಮುನ್ನೋಳಿ, ಕಾಡಪ್ಪ ಮಗದುಮ್ಮ, ಸಂಜಯ ನಿಲಜಗಿ, ರಾಜು ಖೆಮಲಾಪುರೆ, ಬಿ.ಬಿ.ಕಂಠಿ, ಬಿಇಒ ಪ್ರಭಾವತಿ ಪಾಟೀಲ್, ಉಪತಹಶೀಲ್ದಾರ್ ನಾಗೇಂದ್ರ ಪಾಟೀಲ್, ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರು ಪಾಲ್ಗೊಂಡಿದ್ದರು.

ಹುಕ್ಕೇರಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಜರುಗಿದ ತಾಲ್ಲೂಕು ಮಟ್ಟದ ಮಹಾವೀರ ಜಯಂತಿಯಲ್ಲಿ ಮಹಾವೀರರ ಭಾವಚಿತ್ರಕ್ಕೆ ಜೈನ್ ಸಮುದಾಯದವರು ಪೂಜೆ ಸಲ್ಲಿಸಿ ನಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.