ಸವದತ್ತಿ (ಬೆಳಗಾವಿ): ಪಟ್ಟಣದಲ್ಲಿ ಗುರುವಾರ ಪತ್ನಿಯ ಶೀಲ ಶಂಕಿಸಿದ ಪತಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ.
ಶಬಾನಾ ಗೊರವನಕೊಳ್ಳ (28) ಕೊಲೆಯಾದವರು. ಮೆಹಬೂಬಸಾಬ್ ಗರೀಬ್ಸಾಬ್ ಗೊರವನಕೊಳ್ಳ ಆರೋಪಿ.
ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದ ಕಾರಣ ದಂಪತಿ ಮಧ್ಯೆ ಪದೇಪದೇ ತಂಟೆ ನಡೆಯುತ್ತಿತ್ತು. ಇದರಿಂದ ಬೇಸತ್ತು ಶಬಾನಾ ಅವರು ಪತಿಯಿಂದ ದೂರವಾಗಿ ತಮ್ಮ ಮಗಳೊಂದಿಗೆ ಬೇರೆ ಮನೆ ಮಾಡಿದ್ದರು. ಗುರುವಾರ ಬೆಳಿಗ್ಗೆ ಅಲ್ಲಿಗೇ ಬಂದ ಆರೋಪಿ ಹರಿತವಾದ ಆಯುಧದಿಂದ ಇರಿದು ಶಬಾನಾ ಅವರನ್ನು ಕೊಲೆ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.