ADVERTISEMENT

‘ದೇಸಿ ಕ್ರೀಡೆಗಳಲ್ಲಿ ಆಸಕ್ತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:13 IST
Last Updated 28 ಮಾರ್ಚ್ 2023, 6:13 IST
ಹಂದಿಗುಂದ ಸಮೀಪದ ಕಂಕಣವಾಡಿಯಲ್ಲಿ ಆಯೋಜಿಸಿದ ಅಂತರ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಾದೇವ ಗದಾಡಿ, ಶಿವರಾಜ ಪಾಟೀಲ, ಪ್ರದೀಪ ಮಾಳಗಿ ದೀಪ ಬೆಳಗಿಸಿದರು
ಹಂದಿಗುಂದ ಸಮೀಪದ ಕಂಕಣವಾಡಿಯಲ್ಲಿ ಆಯೋಜಿಸಿದ ಅಂತರ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಾದೇವ ಗದಾಡಿ, ಶಿವರಾಜ ಪಾಟೀಲ, ಪ್ರದೀಪ ಮಾಳಗಿ ದೀಪ ಬೆಳಗಿಸಿದರು   

ಹಂದಿಗುಂದ: ‘ಗ್ರಾಮೀಣ ಮಟ್ಟದ ಕ್ರೀಡಾಪಟುಗಳು ಅಂತರರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು. ಯುವಕರು ದೇಸಿ ಕ್ರೀಡೆಗಳನ್ನು ಹೆಚ್ಚು ಆಡುವುದರ ಮೂಲಕ ಸದೃಢ ದೇಹ ಬೆಳೆಸಿಕೊಳ್ಳಬೇಕು‘ ಎಂದು ಕಂಕಣವಾಡಿ ಪಟ್ಟಣ ಪಂಚಾಯಿತಿ ಸದಸ್ಯ ಮಹಾದೇವ ಗದಾಡಿ ಹೇಳಿದರು.

ಸಮೀಪದ ಕಂಕಣವಾಡಿ ಪಟ್ಟಣದಲ್ಲಿ ಹಾಲಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೈ ಹನುಮಾನ್‌ ಗ್ರಾಮೀಣ ಅಭಿವೃದ್ಧಿ ಹಾಗೂ ಸಮಾಜ ಸೇವಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡ ಅಂತರ್‌ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷದ ಯುವ ನಾಯಕ ಶಿವರಾಜ ಪಾಟೀಲ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಜೆಡಿಎಸ್‌ ಮುಖಂಡ ಪ್ರದೀಪ ಮಾಳಗಿ ಮಾತನಾಡಿದರು.

ADVERTISEMENT

ಹಾಲ ಸಿದ್ದೇಶ್ವರ ದೇವಋಷಿ ಹಾಲಪ್ಪ ಪೂಜೇರಿ, ಸಿದ್ದಪ್ಪ ಹುಕ್ಕೇರಿ, ಶಶಿಕಾಂತ ದೇಸಾಯಿ, ಸಿದ್ದಪ್ಪ ಪೂಜಾರಿ ಹಾಲಪ್ಪ ಪೂಜಾರಿ, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ. ದೇಸಾಯಿ, ಸದಾಶಿವ ನಿಡೋನಿ, ಸತ್ಯಪ್ಪ ಪಿರಗಿ, ಸಂಸ್ಥೆಯ ಅಧ್ಯಕ್ಷ ಹಾಲಪ್ಪ ಹುಕ್ಕೇರಿ, ಶಂಕರ ವಗ್ಗರ, ಅಜಿತ ನಾಯಕವಾಡಿ, ಮಹಾದೇವ ಗೋಡೆರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.