ADVERTISEMENT

ಲೂಟಿಕೋರ ಅಪ್ಪ, ಮಕ್ಕಳನ್ನು ಬಿಜೆಪಿಯಿಂದ ಹೊರಹಾಕಲಿ: BSY ವಿರುದ್ಧ ಯತ್ನಾಳ ಟೀಕೆ

ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಹರಿಹಾಯ್ದ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 0:20 IST
Last Updated 8 ಏಪ್ರಿಲ್ 2025, 0:20 IST
<div class="paragraphs"><p>ಬೈಲಹೊಂಗಲದಲ್ಲಿ ಇರುವ ಕಿತ್ತೂರು ರಾಣಿ ಚನ್ನಮ್ಮ ಅವರ ಸಮಾಧಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೋಮವಾರ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು. </p></div>

ಬೈಲಹೊಂಗಲದಲ್ಲಿ ಇರುವ ಕಿತ್ತೂರು ರಾಣಿ ಚನ್ನಮ್ಮ ಅವರ ಸಮಾಧಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೋಮವಾರ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು.

   

ಪ್ರಜಾವಾಣಿ ಚಿತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ವಿದೇಶದಲ್ಲಿ ಸಾಕಷ್ಟು ಆಸ್ತಿ ಮಾಡಿರುವ ಯಡಿಯೂರಪ್ಪ ಮಹಾಭ್ರಷ್ಟ. ಅವರ ಫೋಟೊ ಹಾಕಿದರೆ ವೋಟ್ ಹಾಕುವ ಕಾಲ ಹೋಯಿತು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ADVERTISEMENT

ಪಟ್ಟಣದಲ್ಲಿ ಸೋಮವಾರ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿಗೆ ಗೌರವ ಅರ್ಪಿಸಿ ಮಾತನಾಡಿದ ಅವರು, ‘ಯಡಿಯೂರಪ್ಪ ಕುಟುಂಬ ಬಿಜೆಪಿಯಿಂದ ಹೊರ ಹೋಗುವವರೆಗೆ ನಾವು ಬಿಜೆಪಿಗೆ ಮರಳಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಬರಬೇಕೆ’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ಲಿಂಗಾಯತ ಎಂಬುದನ್ನು ಸಾಬೀತು ಮಾಡಲಿ. ಕೋವಿಡ್‌ ಕಾಲದಲ್ಲಿ ಲೂಟಿ ಮಾಡಿರುವ ಅಪ್ಪ–ಮಕ್ಕಳು ತಿಂಗಳಿಗೊಮ್ಮೆ ಯಾಕೆ ದುಬೈಗೆ ಹೋಗುತ್ತಾರೆ? ವಿದೇಶದಲ್ಲಿ ಆಸ್ತಿ ಮಾಡಿದವರಿಗೆ ನೈತಿಕತೆ ಇಲ್ಲ. ವಿದೇಶದಲ್ಲಿ ಆಸ್ತಿ ಇಲ್ಲ ಎಂದು ಖಡಾಖಂಡಿತವಾಗಿ ಹೇಳುವರೇ? ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಹಣ ಇಟ್ಟಿಲ್ಲ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೂ ಯಡಿಯೂರು ಸಿದ್ದಲಿಂಗೇಶ್ವರ ಬಳಿ ತೆರಳಿ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.

‘ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ನನಗೆ ಎ‌ಲ್ಲಾ ಕಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನನ್ನ ನಾಯಕತ್ವಕ್ಕೆ ಎಲ್ಲರ ಒಪ್ಪಿಗೆಯಿದೆ. ಸಮಾವೇಶವೊಂದರಲ್ಲಿ ಬಿಜೆಪಿ ಶಿಸ್ತು ಸಮಿತಿ ವ್ಯಕ್ತಿಯೊಬ್ಬರು ಬಂದಿದ್ದರು. ಸಮಾವೇಶದಲ್ಲಿ ಏನು ನಡೆಯಿತು, ಜನ ಏನು ಇಷ್ಟಪಡುತ್ತಾರೆ ಎಂಬುದನ್ನು ಆ ವ್ಯಕ್ತಿ ಬಿಜೆಪಿ ಹೈಕಮಾಂಡ್‌ಗೆ ಹೇಳಲಿ’ ಎಂದರು.

‘ಸ್ವಾಮೀಜಿ ಬಳಸಿಕೊಂಡಿಲ್ಲ’: ‘ಸಚಿವ ಸ್ಥಾನದ ಲಾಬಿಗಾಗಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ದೆಹಲಿಗೆ ಯಾರು ಕರೆದೊಯ್ದಿದ್ದರು ಎಂಬುದು ಗೊತ್ತು. ನಾನು ಒಮ್ಮೆಯೂ ಅಂಥ ಕೆಲಸ ಮಾಡಿಲ್ಲ. ಸ್ವಾಮೀಜಿ ಅವರನ್ನು ಲಕ್ಷ್ಮೀ ಹೆಬ್ಬಾಳಕರ, ವಿನಯ ಕುಲಕರ್ಣಿ ಬಳಸಿಕೊಂಡಿದ್ದಾರೆ ಹೊರತು ನನ್ನ ರಾಜಕೀಯ ಭವಿಷ್ಯಕ್ಕೆ ಅವರನ್ನು ಬಳಸಿಕೊಂಡಿಲ್ಲ’ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ನನ್ನ ಮತ್ತು ಕೂಡಲಸಂಗಮ ಸ್ವಾಮೀಜಿ ಸಂಬಂಧ ಮೀಸಲಾತಿ ಹೋರಾಟದಿಂದ ಇದೆ. ಸ್ವಾಮೀಜಿ ಅವರನ್ನೇ ಬದಲಿಸುವೆ ಎನ್ನುವವರ ಬಗ್ಗೆ ನಾನು ಮಾತನಾಡಲ್ಲ’ ಎಂದರು.

‘ಲಕ್ಷ್ಮೀ ಮಿದುಳು, ಹೃದಯ ಯಾರ ಕಡೆ ಇದೆ?’

‘ಯತ್ನಾಳ ಮಿದುಳಿಗೂ, ನಾಲಿಗೆಗೂ ಲಿಂಕ್‌ ಇಲ್ಲ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಆದರೆ, ಅವರ ಮಿದುಳು ಮತ್ತು ಹೃದಯ ಯಾರ ಬಳಿ ಇದೆ ಎಂಬುದು ನಮಗೂ ಗೊತ್ತಿಲ್ಲ. ಇನ್ನೂ ಏನಾದರೂ ಬಾಯಿ ಬಿಟ್ಟರೆ, ನಾನು ಇನ್ನೂ ಬಹಳ ಮುಂದೆ ಹೋಗಿ ಹೇಳಬೇಕಾಗುತ್ತದೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಯತ್ನಾಳ ಪರ ಕೂಡಲಸಂಗಮ ಸ್ವಾಮೀಜಿ ನಿಂತಿರುವುದಕ್ಕೆ ನೋವಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಅಷ್ಟೊಂದು ನೋವಾಗಿದ್ದರೆ, ಅಮೃತಾಂಜನ್‌ ಅಥವಾ ಜಂಡೂಬಾಮ್ ಕೊಡಲೇ? ಆಗ ಸ್ವಾಮೀಜಿ ಅವರನ್ನು ಬಳಸಿಕೊಂಡರು. ಈಗ ಅದೇ ಸ್ವಾಮೀಜಿ ಅವರಿಂದ ನೋವು ಆಗುತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು.

‘ಲಕ್ಷ್ಮೀ ಮಿದುಳುಹೃದಯ ಯಾರ ಕಡೆ ಇದೆ?’

‘ಯತ್ನಾಳ ಮಿದುಳಿಗೂ ನಾಲಿಗೆಗೂ ಲಿಂಕ್‌ ಇಲ್ಲ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಆದರೆ ಅವರ ಮಿದುಳು ಮತ್ತು ಹೃದಯ ಯಾರ ಬಳಿ ಇದೆ ಎಂಬುದು ನಮಗೂ ಗೊತ್ತಿಲ್ಲ. ಇನ್ನೂ ಏನಾದರೂ ಬಾಯಿ ಬಿಟ್ಟರೆ ನಾನು ಇನ್ನೂ ಬಹಳ ಮುಂದೆ ಹೋಗಿ ಹೇಳಬೇಕಾಗುತ್ತದೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ‘ಯತ್ನಾಳ ಪರ ಕೂಡಲಸಂಗಮ ಸ್ವಾಮೀಜಿ ನಿಂತಿರುವುದಕ್ಕೆ ನೋವಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಅಷ್ಟೊಂದು ನೋವಾಗಿದ್ದರೆ ಅಮೃಂತಾಂಜನ್‌ ಅಥವಾ ಜಂಡೂಬಾಮ್ ಕೊಡಲೇ? ಆಗ ಸ್ವಾಮೀಜಿ ಅವರನ್ನು ಬಳಸಿಕೊಂಡರು. ಈಗ ಅದೇ ಸ್ವಾಮೀಜಿ ಅವರಿಂದ ನೋವು ಆಗುತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು.

ನಾನು ಹೊಸದಾಗಿ ಪಕ್ಷ ಕಟ್ಟಿದರೆ ಪರೋಕ್ಷವಾಗಿ ಕಾಂಗ್ರೆಸ್‌ಗೆ ಅನುಕೂಲ ಆಗುತ್ತದೆ. ಹೀಗಾಗಿ ಮುಂದಿನ ಕ್ರಮದ ಬಗ್ಗೆ ಯೋಚಿಸುತ್ತಿರುವೆ. ಕಾಂಗ್ರೆಸ್‌ನವರಿಂದ ಹಣ ಪಡೆದು ಪಕ್ಷ ಕಟ್ಟಿದೆ ಎಂಬ ಆರೋಪ ಬರಬಹುದು.
-ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಉಚ್ಚಾಟಿತ ಶಾಸಕ
ಯತ್ನಾಳ ಶಕ್ತಿ ಯಾರಿಂದಲೂ ಹತ್ತಿಕಲಾಗದು. ಕೇಂದ್ರ ಬಿಜೆಪಿ ನಾಯಕರು ಕೂಡಲೇ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಿ. ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರವಾಗಿ ಪ್ರತಿಭಟಿಸುತ್ತೇವೆ.
-ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.