ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗರ್ಜೂರ ಗ್ರಾಮದಲ್ಲಿ ಬುಧವಾರ ಒಂದು ಗಂಟೆ ಧಾರಾಕಾರ ಮಳೆ ಸುರಿಯಿತು. ಜೋರಾದ ಮಳೆ–ಗಾಳಿಯಿಂದ ಬೃಹತ್ ನೀಲಗಿರಿ ಮರ ಮನೆ ಮೇಲೆ ಬಿದ್ದಿದೆ. ಯಾರಿಗೂ ಗಾಯ ಆಗಿಲ್ಲ.
ನಿಪ್ಪಾಣಿಯಲ್ಲಿ ಕೂಡ ಗುಡುಗು– ಮಿಂಚು ಸಹಿತವಾಗಿ ಮಳೆಯಾದರೆ, ಗೋಕಾಕ, ಹುಕ್ಕೇರಿ ತಾಲ್ಲೂಕುಗಳಲ್ಲಿ ತುಂತುರು ಮಳೆಯಾಯಿತು.
ದೇವರಹಿಪ್ಪರಗಿ (ವಿಜಯಪುರ ಜಿಲ್ಲೆ) ವರದಿ: ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಸಂಜೆ ಒಂದು ಗಂಟೆ ಮಳೆ ಸುರಿಯಿತು. ಸಿಡಿಲಿನ ಹೊಡೆತಕ್ಕೆ 10 ಕುರಿಗಳು ಮೃತಪಟ್ಟಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.