
ಚಿಕ್ಕೋಡಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕರು ಸಲ್ಲಿಸಿದ ನಾವಿನ್ಯ ಪ್ರಯೋಗಾಲಯದ ಪ್ರಸ್ತಾವನೆ ಗುರುತಿಸಿ ಕರ್ನಾಟಕ ಸರ್ಕಾರ ₹ 1.25 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಸಹ ಪ್ರಾಧ್ಯಾಪಕರಾದ ವಿನೋದ ಬಿರಾದಾರ ಹಾಗೂ ಸಂಜಯ ಪೂಜಾರಿ ಸಲ್ಲಿಸಿದ ಇಂಟಲಿಜೆನ್ಸ್ ಸಿಸ್ಟಮ್ ಅಂಡ್ ಕಾಗ್ನಿಟಿವ್ ಕಂಪ್ಯೂಟಿಂಗ್ ವಿಷಯದ ಕುರಿತು ಸಲ್ಲಿಸಿದ ಪ್ರಸ್ತಾವ ಗುರುತಿಸಿ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ ಹಾಗೂ ಐಟಿ ಬಿಟಿ ಯೋಜನೆ ಅಡಿಯಲ್ಲಿ ಅನುದಾನಕ್ಕೆ ಆಯ್ಕೆಯಾಗಿದೆ. ಆಯ್ಕೆಗೆ ಕಾರಣರಾದ ಸಹ ಪ್ರಾಧ್ಯಾಪಕರನ್ನು ಕಾಲೇಜಿನ ಪ್ರಾಚಾರ್ಯ ದರ್ಶನಕುಮಾರ ಬಿಳ್ಳೂರ ಅವರು ಮಂಗಳವಾರ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.