
ಮುನವಳ್ಳಿ: ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ಅಧ್ಯಯನದ ಆಯ್ಕೆಯನ್ನು ಮಾಡಿಕೊಂಡಾಗ ವಿದ್ಯಾರ್ಥಿಗಳ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಹಾಯಕ ಆಗುತ್ತದೆ ಎಂದು ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ ಹೇಳಿದರು.
ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ಬುಧವಾರ ಕೆಪಿಎಸ್ ಪ್ರೌಢಶಾಲೆ ಮತ್ತು ಇಂಡಿಯಾ ಲಿಟರೆಸಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜರುಗಿದ 9 ಮತ್ತು 10ನೇ ತರಗತಿ ವೃತ್ತಿ ಮೇಳ 2025-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಉನ್ನತ ಶಿಕ್ಷಣದ ಬಗ್ಗೆ ಕನಸು ಕಂಡು ಭವಿಷ್ಯದಲ್ಲಿ ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ವೈ ಪಿ ಬೋಳಶೆಟ್ಟಿ, ಇಂಡಿಯಾ ಲಿಟರೆಸಿ ಸಂಸ್ಥೆಯ ಎಂ.ಬಿ. ಗಾಳಿ, ಶಿಕ್ಷಕಿ ಎಸ್.ಟಿ. ಹಂಪನ್ನವರ ಮಾತನಾಡಿದರು.
ದಿವ್ಯಾಶ್ರೀ ಬೋಸಲೆ, ಎಸ್.ಜಿ. ಕ್ಯಾಮಣ್ಣವರ, ಸಿ.ಎಸ್. ಹುಡೇದ ಇದ್ದರು. ಶಿಕ್ಷಕಿ ಬಿ.ಎಂ. ಲಿಗಾಡೆ ಸ್ವಾಗತಿಸಿದರು. ಮಂಜುಳಾ ತೇಗೂರ ನಿರೂಪಿಸಿದರು. ಆರ್.ವಿ. ಗಣಾಚಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.