ADVERTISEMENT

ಮಹಾ ಮಳೆ: ಕರ್ನಾಟಕ–ಮಹಾರಾಷ್ಟ್ರ ನಡುವೆ ಸೇತುವೆ ಸಂಚಾರ ಬಂದ್

ಮಹಾ ಮಳೆ: 4 ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:05 IST
Last Updated 17 ಜೂನ್ 2025, 13:05 IST
<div class="paragraphs"><p>ದೂಧಗಂಗಾ ನದಿಗೆ ನಿರ್ಮಿಸಿದ ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ– ದತ್ತವಾಡ ಸೇತುವೆ ಸೋಮವಾರ ರಾತ್ರಿಯಿಂದ ಜಲಾವೃತಗೊಂಡಿದ್ದು, ಕರ್ನಾಟಕ– ಮಹಾರಾಷ್ಟ್ರ ನಡುವಿನ ಸಂಚಾರ ಸ್ಥಗಿತಗೊಂಡಿದೆ</p></div>

ದೂಧಗಂಗಾ ನದಿಗೆ ನಿರ್ಮಿಸಿದ ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ– ದತ್ತವಾಡ ಸೇತುವೆ ಸೋಮವಾರ ರಾತ್ರಿಯಿಂದ ಜಲಾವೃತಗೊಂಡಿದ್ದು, ಕರ್ನಾಟಕ– ಮಹಾರಾಷ್ಟ್ರ ನಡುವಿನ ಸಂಚಾರ ಸ್ಥಗಿತಗೊಂಡಿದೆ

   

ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್. ಚಿನಕೇಕರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ, ಮಲಿಕವಾಡ–ದತ್ತವಾಡ, ನಿಪ್ಪಾಣಿ ತಾಲ್ಲೂಕಿನ ಬಾರವಾಡ–ಕುನ್ನೂರ ಹಾಗೂ ಕಾರದಗಾ– ಭೋಜ ಸೇತುವೆಗಳು ಜಲಾವೃತಗೊಂಡಿವೆ. ಈ ಮಾರ್ಗದಲ್ಲಿ ಕರ್ನಾಟಕ– ಮಹಾರಾಷ್ಟ್ರ ನಡುವಿನ ಸಂಚಾರ ಸ್ಥಗಿತಗೊಂಡಿದೆ.

ADVERTISEMENT

ಮಹಾರಾಷ್ಟ್ರದ ಕೊಯ್ನಾ ಜಲಾನಯನ ಪ್ರದೇಶದಲ್ಲಿ 13.7 ಸೆಂ.ಮೀ, ವಾರಣಾದಲ್ಲಿ 11.3 ಸೆಂ.ಮೀ, ಕಾಳಮ್ಮವಾಡಿಯಲ್ಲಿ 6.9 ಸೆಂ.ಮೀ, ಮಹಾಬಳೇಶ್ವರದಲ್ಲಿ 12.5 ಸೆಂ.ಮೀ, ನವಜಾದಲ್ಲಿ 12.8 ಸೆಂ.ಮೀ, ರಾಧಾನಗರಿಯಲ್ಲಿ 12.8 ಸೆಂ.ಮೀ, ಸಾಂಗ್ಲಿಯಲ್ಲಿ 1.8 ಸೆಂ.ಮೀ ಹಾಗೂ ಕೊಲ್ಹಾಪುರದಲ್ಲಿ 1.6 ಸೆಂ.ಮೀ ಪ್ರಮಾಣದಷ್ಟು ಮಳೆ ಮಂಗಳವಾರ ದಾಖಲಾಗಿದೆ.

ಕೊಲ್ಹಾಪುರ ಜಿಲ್ಲೆಯ ರಾಜಾಪೂರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 44,125 ಕ್ಯೂಸೆಕ್‌ ಹೊರ ಹರಿವು ಇದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಗೆ 15,840 ಕ್ಯೂಸೆಕ್‌ ಒಳ ಹರಿವು ಇದೆ. ಕಲ್ಲೋಳ–ಯಡೂರ ಕಿರು ಸೇತುವೆ ಬಳಿಯಲ್ಲಿ 59,965 ಕ್ಯೂಸೆಕ್‌ ಹರಿವು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.