ಬೆಳಗಾವಿ: ತಾಲ್ಲೂಕಿನ ಮಚ್ಚೆಯಲ್ಲಿರುವ ಕೆಎಸ್ಅರ್ಪಿ 2ನೇ ಪಡೆಯಿಂದ ಪ್ರಸಕ್ತ ಸಾಲಿನ ಅಂತರ ದಳಗಳ ವಾರ್ಷಿಕ ಕ್ರೀಡಾಕೂಟ ಎರಡು ದಿನಗಳವರೆಗೆ ನಡೆಯಿತು.
ಅತಿಥಿಯಾಗಿದ್ದ ಕಮಾಂಡೆಂಟ್ ಹಂಜಾ ಹುಸೇನ್, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಿದರು.
‘ಒತ್ತಡ ನಿರ್ವಹಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.
ಸಹಾಯಕ ಕಮಾಂಡೆಂಟ್ ನಾಗೇಶ ಯಡಾಲ್, ಆರ್ಪಿಐಗಳಾದ ಸುರೇಶ ಲಕ್ಕಣ್ಣವರ, ಪ್ರಶಾಂತ ಕುಂದರಗಿ, ಜಿನೇಶ್ ಪಡಾನಾಡ, ಪಾಂಡು ಗಿರಡ್ಡಿ, ಶ್ರೀಮಂತ ಹಳ್ಳೂರ, ಗೋವಿಂದ ಸಿದ್ದಾರೆಡ್ಡಿ, ಮಹೇಶ್ ಹೊಸಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.