ಹುಕ್ಕೇರಿ: ಸ್ಥಳೀಯ ನ್ಯಾಯಾಲಯದಲ್ಲಿ ಶನಿವಾರ ನ್ಯಾಯಾಧೀಶ ಕೆ.ಎಸ್.ರೋಟ್ಟೆರ್ ನೇತೃತ್ವದಲ್ಲಿ ನಡೆದ ಲೋಕ್ಅದಾಲತ್ನಲ್ಲಿ 44 ಪ್ರಕರಣಗಳು ಇತ್ಯರ್ಥಗೊಂಡು, ₹2.05 ಕೋಟಿ ಮೊತ್ತ ವಸೂಲು ಮಾಡಲಾಗಿದೆ.
ಜುಲೈ ತಿಂಗಳ ಮೊದಲ ವಾರದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವೂ ಇತ್ಯರ್ಥಗೊಂಡಿತು. ಅಪಘಾತ ಪ್ರಕರಣವೊಂದರಲ್ಲಿ ಪಾರ್ಟಿಯಿಂದ (ವಿಮೆ ಇಲ್ಲದೆ) ₹14 ಲಕ್ಷ ಪರಿಹಾರ ಕೊಡಿಸಲಾಯಿತು ಎಂದು ಹಿರಿಯ ವಕೀಲ ಕೆ.ಬಿ.ಕುರಬೇಟ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.