ADVERTISEMENT

ಶ್ರೀಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಚನ್ನರಾಜ ತಂಡ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 4:39 IST
Last Updated 1 ಅಕ್ಟೋಬರ್ 2025, 4:39 IST
ಎಂ.ಕೆ. ಹುಬ್ಬಳ್ಳಿಯಲ್ಲಿರುವ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಪೆನಲ್‌ನ ಎಲ್ಲ ನಿರ್ದೇಶಕರ ತಂಡವು ಮಂಗಳವಾರ ಭೇಟಿ ನೀಡಿತು
ಎಂ.ಕೆ. ಹುಬ್ಬಳ್ಳಿಯಲ್ಲಿರುವ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಪೆನಲ್‌ನ ಎಲ್ಲ ನಿರ್ದೇಶಕರ ತಂಡವು ಮಂಗಳವಾರ ಭೇಟಿ ನೀಡಿತು   

ಎಂ.ಕೆ.ಹುಬ್ಬಳ್ಳಿ:  ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಪೆನಲ್‌ನ ಎಲ್ಲ 15 ನಿರ್ದೇಶಕರು ಇಲ್ಲಿನ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮಂಗಳವಾರ ಭೇಟಿ ನೀಡಿದರು.

ಶ್ರೀ ಗಣಪತಿ ಹಾಗೂ ಶ್ರೀ ಬಂಡೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು, ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ತೆರಳಿ ಯಂತ್ರೋಪಕರಣಗಳ ಸ್ಥಿತಿ-ಗತಿ ಮತ್ತು ಕೆಲಸ ನಿರ್ವಹಣೆ ಬಗ್ಗೆ ತಂಡವು ಪರಿಶೀಲನೆ ನಡೆಸಿತು. ಅಧಿಕಾರಿಗಳ ಮತ್ತು ಕಾರ್ಮಿಕರಿಂದ ಮಾಹಿತಿ ಪಡೆಯಿತು.

ಎಂ.ಕೆ. ಹುಬ್ಬಳ್ಳಿಯಲ್ಲಿರುವ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಪೆನಲ್‌ನ ಎಲ್ಲ ನಿರ್ದೇಶಕರ ತಂಡವು ಮಂಗಳವಾರ ಭೇಟಿ ನೀಡಿತು

ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಕಾರ್ಖಾನೆ ಕಚೇರಿಯಲ್ಲಿ ಸಭೆ ನಡೆಸಿದ ಎಲ್ಲ ನಿರ್ದೇಶಕರು, ಬರುವ ಹಂಗಾಮಿಗೆ ಸಂಬಂಧಿಸಿದಂತೆ ಸಮಗ್ರ ಸಿದ್ಧತೆಗಳ ಕುರಿತು ಚರ್ಚಿಸಿದರು. ಕಾರ್ಖಾನೆಯ ಪುನಶ್ಚೇತನದ ಕುರಿತಂತೆ ಯೋಜನೆ ರೂಪಿಸುವ ಕುರಿತು ಮಾತನಾಡಿದರು.

ADVERTISEMENT

ಚನ್ನರಾಜ ಹಟ್ಟಿಹೊಳಿ ಜೊತೆ ಫಕ್ಕೀರಪ್ಪ ಸಕ್ರೆಣ್ಣವರ, ಶಿವನಗೌಡ ಪಾಟೀಲ, ಶಂಕರ ಕಿಲ್ಲೇದಾರ, ಶಿವಪುತ್ರಪ್ಪ ಮರಡಿ, ಶ್ರೀಕಾಂತ ಇಟಗಿ, ಶ್ರೀಶೈಲ ತುರಮರಿ, ಸುರೇಶ ಹುಲಿಕಟ್ಟಿ, ರಘು ಪಾಟೀಲ, ರಾಮನಗೌಡ ಪಾಟೀಲ, ಶಂಕರ ಹೊಳಿ, ಬಾಳಪ್ಪ ಪೂಜಾರ, ಭರಮಪ್ಪ ಶಿಗೆಹಳ್ಳಿ, ಲಲಿತಾ ಪಾಟೀಲ, ಸುನೀತ ಲಂಗೋಟಿ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಹಾಗೂ ಸಿಬ್ಬಂದಿ ಇದ್ದರು.

೩೦ಎಂಕೆಎಚ್೧ ಕಾರ್ಖಾನೆಯಲ್ಲಿ ಸಭೆ ನಡೆಸಿದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ನೂತನ ನಿರ್ದೇಶಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.