ADVERTISEMENT

ಬೆಳಗಾವಿ: ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ನಿಧನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2018, 14:34 IST
Last Updated 6 ನವೆಂಬರ್ 2018, 14:34 IST
ಮಾಜಿ ಸಚಿವ ಓಂ ಪ್ರಕಾಶ ಕಣಗಲಿ
ಮಾಜಿ ಸಚಿವ ಓಂ ಪ್ರಕಾಶ ಕಣಗಲಿ   

ಮಾಜಿ ಸಚಿವ ಓಂಪ್ರಕಾಶ ಕಣಗಲಿ ನಿಧನ- ಕಣಗಲಾದಲ್ಲಿ ಅಂತ್ಯಕ್ರಿಯೆ

ಸಂಕೇಶ್ವರ (ಬೆಳಗಾವಿ): ಮಾಜಿ ಸಚಿವ ಓಂ ಪ್ರಕಾಶ ಕಣಗಲಿ (69) ಮಂಗಳವಾರಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ವೃತ್ತಿಯಿಂದ ವಕೀಲರಾಗಿದ್ದ ಅವರು ಮಾಜಿ ಕೇಂದ್ರ ಸಚಿವ ಬಿ.ಶಂಕರಾನಂದ ಅವರ ಹಿರಿಯ ಪುತ್ರ. ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು,ವೀರಪ್ಪ ಮೋಯ್ಲಿ ಅವರ ಮಂತ್ರಿ ಮಂಡಲದಲ್ಲಿಪ್ರವಾಸೋದ್ಯಮ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಚಿಕ್ಕೋಡಿ ತಾಲೂಕಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ಹೆಸರಿನಲ್ಲಿ ಸಹಕಾರಿ ರಂಗದಲ್ಲಿ ಸಕ್ಕರೆ ಕಾರ್ಖಾನೆಸ್ಥಾಪಿಸಲು ನೋಂದಣಿ ಮಾಡಿಸಿದ್ದರು.

ADVERTISEMENT

ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸಂಕೇಶ್ವರ ಸಮೀಪದ ಕಣಗಲಾದಲ್ಲಿ ನಡೆಯಿತು. ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಇತರರು ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.