ADVERTISEMENT

ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 12:59 IST
Last Updated 24 ಜನವರಿ 2024, 12:59 IST
ರಿಪಬ್ಲಿಕ್ ಕಪ್ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ವಿಜೇತರಾದ ಬೈಲಹೊಂಗಲದ ತಿರಂಗಾ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು
ರಿಪಬ್ಲಿಕ್ ಕಪ್ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ವಿಜೇತರಾದ ಬೈಲಹೊಂಗಲದ ತಿರಂಗಾ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು   

ಬೈಲಹೊಂಗಲ: ಪಟ್ಟಣದ ತಿರಂಗಾ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು ಮಹಾರಾಷ್ಟ್ರದ ಅಹಮದ ನಗರದಲ್ಲಿ ಜ.21, 22 ರಂದು ನಡೆದ ರಿಪಬ್ಲಿಕ್ ಕಪ್ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ಅಮೋಘ ಪ್ರದರ್ಶನ ನೀಡಿ ಜಯಶಾಲಿಗಳಾಗಿದ್ದಾರೆ.

7 ವರ್ಷದೊಳಗಿನ ಸ್ಪರ್ಧೆಯಲ್ಲಿ ಕಾರ್ತಿಕೆಯ್ ಸುಣಗಾರ, ಗೃಹಿತ ಮೂಗವೀರ ಬಂಗಾರದ ಪದಕ, 13 ವರ್ಷದೊಳಗಿನ ಸ್ಪರ್ಧೆಯಲ್ಲಿ ಶಿವಶಂಕರ ಬಡಿಗೇರ, ಚಿನ್ಮಯ ಸವದಿ ಬಂಗಾರದ ಪದಕ, 15 ವರ್ಷದೊಳಗಿನ ಸ್ಪರ್ಧೆಯಲ್ಲಿ ನಿಕೇತನ ಕುಡಸೋಮನ್ನವರ, ಶಮಿತ ದೇವಲಾಪುರ, ಅಕ್ಷಯ್ ಮೇಟ್ಯಾಲ ಬಂಗಾರದ ಹಾಗೂ ಬೆಳ್ಳಿ ಪದಕ, 16 ವರ್ಷದೊಳಗಿನ ಸ್ಪರ್ಧೆಯಲ್ಲಿ ಸಾಹಸ ಕಡಕೋಳ, ಬಾಳೇಶ ಅಲಾರವಾಡ ಬಂಗಾರದ ಪದಕ ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳನಾಡು, ಪಂಜಾಬ, ಹರಿಯಾಣ , ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ತಿರಂಗಾ ಅಕಾಡೆಮಿಯ ಸುಹಾಸ ವಕ್ಕುಂದ ತರಬೇತಿ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.