ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತದೃಷ್ಟಿಯಿಂದ ₹ 20 ಲಕ್ಷ ಕೋಟಿ ನೂತನ ಪ್ಯಾಕೇಜ್ ಘೋಷಿಸಿರುವುದನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಕಲ್ಪನಾತೀತ ಮಾರಕ ಕೊರೊನಾದಿಂದಾಗಿ ದೇಶವು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕವಾಗಿ ಎಂದೂ ಕೇಳರಿಯದ ಕಷ್ಟದ ದಿನಗಳನ್ನು ಎದುರಿಸುವಂಥ ದಿನಗಳು ಬಂದಿವೆ. ದುಡಿಯುವ ಕೈಗಳಿಗೆ ಆಹಾರ ಸೇರಿ ನೂರಾರು ಸಮಸ್ಯೆಗಳು ಎದುರಾಗಿವೆ. ಇದನ್ನುಗಮನದಲ್ಲಿಟ್ಟುಕೊಂಟು ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಪ್ರಧಾನಿ ಆರ್ಥಿಕ ಪ್ಯಾಕೇಜ್ ಪ್ರಕಟಿಸಿರುವುದು ಸಂದರ್ಭೋಚಿತವಾಗಿದೆ’ ಎಂದಿದ್ದಾರೆ.
‘ಪ್ರಧಾನಿ ನಡೆ ಪ್ರಸ್ತುತ ದೇಶದ ಜನತೆ ಆಧಾರವಾಗಿದೆ. ಸ್ವಾವಲಂಬಿ ಸಂಕಲ್ಪ ಹಾಗೂ ಸ್ವದೇಶಿ ವಸ್ತುಗಳನ್ನು ಬಳಸಲು ನೀಡಿರುವ ಕರೆಯೂ ಮುಂದಿನ ದಿನಮಾನಗಳಲ್ಲಿ ನೂತನವಾದ ಭಾಷ್ಯ ಬರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.