ಉಗರಗೋಳ (ಸವದತ್ತಿ ತಾಲ್ಲೂಕು): ಗ್ರಾಮದ ಸುತ್ತಮುತ್ತ ಮೂರು ದಿನಗಳಿಂದ ಸುರಿದ ಮಳೆಗೆ ಇಲ್ಲಿನ ಹೆಗ್ಗೋಳ್ಳದ ಎರಡು ಗುಡ್ಡಗಳ ನಡುವೆ ನಿರ್ಮಿಸಿದ್ದ ಚಿಕ್ಕ ಡ್ಯಾಂ ಒಡೆದ ಪರಿಣಾಮ, ನೀರು ಹೊಲ ಗದ್ದೆಗಳಿಗೆ ನುಗ್ಗಿದೆ. ಇದರಿಂದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.
ಹೆಗ್ಗೋಳ್ಳ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯು ನೀರಿನ ರಭಸಕ್ಕೆ ಹಾಳಾಗಿದೆ. ಗ್ರಾಮದಲ್ಲಿ ಸವಣೂರು ನವಾಬರು ಕಟ್ಟಿಸಿದ ಕೆರೆ ಸಂಪೂರ್ಣ ತುಂಬಿ ಹೆಚ್ಚಾದ ನೀರು ಕೆಳಗಿನ ಹೊಲಗದ್ದೆಗಳಿಗೆ ನುಗ್ಗಿದ್ದರಿಂದ ಅವು ಕೆರೆಯಂತಾಗಿವೆ. ಹಳ್ಳದ ನೀರಿನ ರಭಸಕ್ಕೆ ಗೋವಿನ ಜೋಳ, ಕಬ್ಬು, ಚೆಂಡು ಹೂವು ಮೊದಲಾದ ಬೆಳೆಗಳು ನೀರು ಪಾಲಾಗಿದ್ದು, ಸಮರ್ಪಕ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.