ಬೆಳಗಾವಿ: ಕೋವಿಡ್–19 ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ದಾನಿಗಳ ನೆರವಿನಿಂದ ಆರಂಭಿಸಿದ ‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ'ವು 86ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಇಲ್ಲಿನ ವಡಗಾವಿಯ 40 ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಅಲಾರವಾಡ ಸೇತುವೆ ಕೆಳಗೆ ಬುಧವಾರ ನಡೆದ ಕಾರ್ಯಕ್ರಮವನ್ನು ಕನ್ನಡ ಹೋರಾಟಗಾರ ಮಲ್ಲಪ್ಪ ಅಕ್ಷರದ, ಗಜಾನನ ಗುಂಜೇರಿ, ರಾಜು ಟೋಪಗಿ ಆಯೋಜಿಸಿದ್ದರು. ಪ್ರಾದೇಶಿಕ ಆಯುಕ್ತರ ಕಚೇರಿಯ ಉಪತಹಶೀಲ್ದಾರ್ ಸಾರಿಕಾ ಸಿಂಗನಮಕ್ಕಿ, ರಾಜೇಶ ಸಿಂಗನಮಕ್ಕಿ, ಲೆಕ್ಕಪತ್ರ ಪರಿಶೋಧಕ ಪ್ರಕಾಶ ತಿಗಡಿ, ಹಣಕಾಸು ಇಲಾಖೆಯ ಜಂಟಿ ನಿರ್ದೇಶಕ ಈರಣ್ಣ ಚಂದರಗಿ, ರವಿ ಸಂಕೇಶ್ವರಿ, ಹರೀಶ ಕರಿಗೊಣ್ಣವರ ಕಿಟ್ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.