ADVERTISEMENT

ಬೆಳಗಾವಿ | ತಗ್ಗಿದ ಮಳೆ, 4 ಸೇತುವೆಗಳು ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 3:29 IST
Last Updated 12 ಜುಲೈ 2020, 3:29 IST
ಸಂಚಾರಕ್ಕೆ ಮುಕ್ತವಾಗಿರುವ ಅಕ್ಕೋಳ-ಸಿದ್ನಾಳ ಸೇತುವೆ
ಸಂಚಾರಕ್ಕೆ ಮುಕ್ತವಾಗಿರುವ ಅಕ್ಕೋಳ-ಸಿದ್ನಾಳ ಸೇತುವೆ   

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ತಗ್ಗಿದೆ. ನಿಪ್ಪಾಣಿ ತಾಲ್ಲೂಕಿನ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ, ಭೋಜ್-ಕುನ್ನೂರ, ಬಾರವಾಡ-ಕುನ್ನೂರ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ.

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿಯ ನೀರಿನ ಮಟ್ಟ ಎರಡು ಅಡಿಗಳಷ್ಟು ಕಡಿಮೆ ಆಗಿದೆ. ಸದ್ಯ ಸೇತುವೆ ಮೇಲೆ ಮುಕ್ಕಾಲು ಅಡಿಯಷ್ಟು ನೀರಿದ್ದು ಮಧ್ಯಾಹ್ನದ ನಂತರ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT