ADVERTISEMENT

ಚಂದ್ರಮೌಳಿ ಕಾಲೊನಿಯಲ್ಲಿ ಬಸ್‌ ನಿಲುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮೇ 2019, 10:19 IST
Last Updated 14 ಮೇ 2019, 10:19 IST
ಬೆಳಗಾವಿಯ ಚಂದ್ರಮೌಳಿ ಕಾಲೊನಿಯಲ್ಲಿ ವಿನಂತಿ ಮೇರೆಗೆ ಬಸ್‌ ನಿಲುಗಡೆ ಮಾಡುವಂತೆ ಕೋರಿ ನಿವಾಸಿಗಳ ಸಂಘದವರು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕ ಮಹಾದೇವಪ್ಪ ಮುಂಜಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಬೆಳಗಾವಿಯ ಚಂದ್ರಮೌಳಿ ಕಾಲೊನಿಯಲ್ಲಿ ವಿನಂತಿ ಮೇರೆಗೆ ಬಸ್‌ ನಿಲುಗಡೆ ಮಾಡುವಂತೆ ಕೋರಿ ನಿವಾಸಿಗಳ ಸಂಘದವರು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕ ಮಹಾದೇವಪ್ಪ ಮುಂಜಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಬೆಳಗಾವಿ: ಇಲ್ಲಿನ ಹೊರವಲಯದ ಕಣಬರಗಿ ರಸ್ತೆಯಲ್ಲಿರುವ ಚಂದ್ರಮೌಳಿ ಕಾಲೊನಿಯಲ್ಲಿ ‘ವಿನಂತಿ ಮೇರೆಗೆ ಬಸ್‌ ನಿಲುಗಡೆ ಮಾಡಬೇಕು’ ಎಂದು ಕೋರಿ ಅಲ್ಲಿನ ನಿವಾಸಿಗಳ ಸಂಘದವರು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕ ಮಹಾದೇವಪ್ಪ ಮುಂಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಈ ಬಡಾವಣೆಯು ರುಕ್ಮಿಣಿ ನಗರ ಹಾಗೂ ಭಾರತ ಕಾಲೊನಿಯ ಮಧ್ಯದಲ್ಲಿ ಬರುತ್ತದೆ. 60ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ಸಾರಿಗೆ ಬಸ್‌ಗಳನ್ನು ಶಿವತೀರ್ಥ ಅಪಾರ್ಟ್‌ಮೆಂಟ್ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಹೀಗಾಗಿ, ಬಡಾವಣೆಯಲ್ಲಿ ನಗರ ಸಾರಿಗೆ ಬಸ್‌ಗಳು ನಿಲುಗಡೆ ಮಾಡುವಂತೆ ನಿರ್ದೇಶನ ಕೊಡಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT