ADVERTISEMENT

ಖಾನಾಪುರ: ಗದ್ದೆ ಸಿದ್ಧಗೊಳಿಸುವಾಗ ರೋಟವೇಟರ್ ಮಗುಚಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 5:28 IST
Last Updated 19 ಜುಲೈ 2021, 5:28 IST
ಗದ್ದೆ ಸಿದ್ಧಗೊಳಿಸುವಾಗ ರೋಟವೇಟರ್ ಮಗುಚಿ ಚಾಲಕ ಸಾವು
ಗದ್ದೆ ಸಿದ್ಧಗೊಳಿಸುವಾಗ ರೋಟವೇಟರ್ ಮಗುಚಿ ಚಾಲಕ ಸಾವು   

ಖಾನಾಪುರ (ಬೆಳಗಾವಿ ಜಿಲ್ಲೆ): ಭತ್ತದ ನಾಟಿಗಾಗಿ ಗದ್ದೆಯನ್ನು ಸಿದ್ಧಗೊಳಿಸುವ ಸಂದರ್ಭದಲ್ಲಿ ರೋಟವೇಟರ್ ಮಗುಚಿ ಬಿದ್ದಿದ್ದರಿಂದ ಚಾಲಕ ಅದರಡಿ ಸಿಲುಕಿ ಮೃತರಾದ ಘಟನೆ ಖಾನಾಪುರ ತಾಲ್ಲೂಕಿನ ಬೇಕವಾಡ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಮೃತರನ್ನು ಹಾವೇರಿ‌ ಜಿಲ್ಲೆಯ ವೃಷಭ ಯರನಾಳ (22) ಎಂದು ಗುರುತಿಸಲಾಗಿದೆ.

ರೋಟಾವೇಟರ್ ಅಡಿ ಸಿಲುಕಿದ್ದ ಚಾಲಕನ ಮೃತದೇಹವನ್ನು ಸ್ಥಳೀಯರು ಜೆಸಿಬಿ ಬಳಸಿ ಹೊರತೆಗೆದರು.

ADVERTISEMENT

ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.