ADVERTISEMENT

ಸಂಡೂರು | ಲಾರಿಯಿಂದ ಕೆಳಗೆ ಬಿದ್ದು ಚಾಲಕ ಸಾವು 

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:19 IST
Last Updated 30 ಜುಲೈ 2025, 7:19 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಾರ್ಖಾನೆಯ ಕೊರೆಕ್ಸ್ ಪ್ಲಾಂಟ್‍ನಲ್ಲಿ ಲಾರಿ ಚಾಲಕನೋಬ್ಬ ಲಾರಿಯಿಂದ ಕೆಳಗೆ ಜಾರಿ ಬಿದ್ದು, ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ADVERTISEMENT

ಉತ್ತರ ಪ್ರದೇಶದ ಮೂಲದ ಹಬಿಬೂಲ್ ರೆಹೆಮಾನ್ (50) ಮೃತಪಟ್ಟ ಲಾರಿ ಚಾಲಕ. ಮೃತನು ಜಿಂದಾಲ್ ಕಾರ್ಖಾನೆಯಲ್ಲಿ ಲಾರಿಗೆ ಕೋಲ್ ಪೌಡರ್‌ ಲೋಡ್ ಮಾಡಿ, ಮುಚ್ಚಳ ಹಾಕುವಾಗ ಮೇಲಿನಿಂದ ಕೆಳೆಗೆ ಜಾರಿ ಬಿದ್ದು ಗಾಯಗೊಂಡಿದ್ದ. ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಮೃತನ ಸಹೋದರ ವಲಿಮೊಹಮ್ಮದ್ ನೀಡಿದ ದೂರು ಆಧರಿಸಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.