ADVERTISEMENT

ಮಹಾರಾಷ್ಟ್ರ ಪತ್ರಕರ್ತರ ಸಂಘದ ಗೌರವಕ್ಕೆ ಪುಢಾರಿ ಪತ್ರಿಕೆ ಸುದ್ದಿ ಸಂಪಾದಕ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 14:37 IST
Last Updated 4 ಜನವರಿ 2021, 14:37 IST
ಸಂಜಯ ಸೂರ್ಯವಂಶಿ
ಸಂಜಯ ಸೂರ್ಯವಂಶಿ   

ಬೆಳಗಾವಿ: ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘ ನೀಡುವ ವಿಶೇಷ ಪುರಸ್ಕಾರಕ್ಕೆ ಇಲ್ಲಿನ ಪತ್ರಕರ್ತ ಮತ್ತು ‘ಪುಢಾರಿ’ ದಿನಪತ್ರಿಕೆ ಸುದ್ದಿ ಸಂಪಾದಕ ಸಂಜಯ ಸೂರ್ಯವಂಶಿ ಆಯ್ಕೆಯಾಗಿದ್ದಾರೆ.

‘ಮಹಾರಾಷ್ಟ್ರದಿಂದ ಹೊರಗಿರುವ ಮರಾಠಿ ಪತ್ರಿಕೆಗಳಲ್ಲಿನ ಉತ್ತಮ ಪತ್ರಕರ್ತರನ್ನು ಗುರುತಿಸಿ ಸಂಘವು ಈ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿಯ ಪುರಸ್ಕಾರಕ್ಕೆ ಸಂಜಯ ಭಾಜನವಾಗಿದ್ದಾರೆ. ಜ. 6ರಂದು ಸಂಜೆ 4ಕ್ಕೆ ಮುಂಬೈನ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಪ್ರದಾನ ಮಾಡಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಅವರನ್ನು ಬೆಳಗಾವಿಯ ಪತ್ರಕರ್ತರು ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.