ADVERTISEMENT

ಸವದತ್ತಿ: ಟ್ಯಾಂಕ್‌ನಲ್ಲಿ ಕ್ರಿಮಿನಾಶಕ; 3 ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 23:47 IST
Last Updated 14 ಜುಲೈ 2025, 23:47 IST
ಹೂಲಿಕಟ್ಟಿ ಜನತಾ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆರೋಗ್ಯ ಸಿಬ್ಬಂದಿ ಪರಿಶೀಲಿಸಿದರು
ಹೂಲಿಕಟ್ಟಿ ಜನತಾ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆರೋಗ್ಯ ಸಿಬ್ಬಂದಿ ಪರಿಶೀಲಿಸಿದರು   

ಸವದತ್ತಿ (ಬೆಳಗಾವಿ ಜಿಲ್ಲೆ): ಕ್ರಿಮಿನಾಶಕ ಬೆರೆಸಿದ್ದ ನೀರು ಕುಡಿದು ಸೋಮವಾರ ತಾಲ್ಲೂಕಿನ ಹೂಲಿಕಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. 

ಶಿಕ್ಷಕರು ತಕ್ಷಣವೇ ಆಂಬುಲೆನ್ಸ್‌ ಕರೆಸಿ, ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.

‘ಟ್ಯಾಂಕ್‌ ಸುತ್ತಲಿನ ವಾಸನೆ ಹಾಗೂ ಹತ್ತಿರ ಸಿಕ್ಕ ಬಾಟಲಿಯಿಂದ ಟ್ಯಾಂಕ್‌ಗೆ ದುಷ್ಕರ್ಮಿಗಳು ಕೀಟನಾಶಕ ಔಷಧಿ ಬೆರೆಸಿದ್ದಾರೆ ಎಂದು ವೈದ್ಯರು ಪರೀಕ್ಷಿಸಿ ದೃಢ ಪಡಿಸಿದ್ದಾರೆ.

ADVERTISEMENT

Quote - ಮಕ್ಕಳು ಸೇವಿಸುವ ನೀರಿನಲ್ಲಿ ವಿಷ ಬೆರೆಸಿರುವುದು ಆಘಾತಕಾರಿ ಸಂಗತಿ. ಎಸ್‌ಪಿ ಡಿವೈಎಸ್‌ಪಿ ಅವರಿಗೆ ತನಿಖೆ ತೀವ್ರಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.  ವಿಶ್ವಾಸ್ ವೈದ್ಯ ಶಾಸಕ

Quote - ಶಾಲೆಯ ಕುರಿತು ಗ್ರಾಮಸ್ಥರಲ್ಲಿ ಧ್ವೇಷ ಭಾವನೆ ಇಲ್ಲ. ಆದರೂ ಕಿಡಿಗೇಡಿಗಳು ವಿಷ ಬೆರೆಸಿದ್ದಾರೆ. ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಸ್.ಬಿ. ಗೋರಿನಾಯ್ಕ ಮುಖ್ಯ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.