ಸವದತ್ತಿ (ಬೆಳಗಾವಿ ಜಿಲ್ಲೆ): ಕ್ರಿಮಿನಾಶಕ ಬೆರೆಸಿದ್ದ ನೀರು ಕುಡಿದು ಸೋಮವಾರ ತಾಲ್ಲೂಕಿನ ಹೂಲಿಕಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಶಿಕ್ಷಕರು ತಕ್ಷಣವೇ ಆಂಬುಲೆನ್ಸ್ ಕರೆಸಿ, ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.
‘ಟ್ಯಾಂಕ್ ಸುತ್ತಲಿನ ವಾಸನೆ ಹಾಗೂ ಹತ್ತಿರ ಸಿಕ್ಕ ಬಾಟಲಿಯಿಂದ ಟ್ಯಾಂಕ್ಗೆ ದುಷ್ಕರ್ಮಿಗಳು ಕೀಟನಾಶಕ ಔಷಧಿ ಬೆರೆಸಿದ್ದಾರೆ ಎಂದು ವೈದ್ಯರು ಪರೀಕ್ಷಿಸಿ ದೃಢ ಪಡಿಸಿದ್ದಾರೆ.
Quote - ಮಕ್ಕಳು ಸೇವಿಸುವ ನೀರಿನಲ್ಲಿ ವಿಷ ಬೆರೆಸಿರುವುದು ಆಘಾತಕಾರಿ ಸಂಗತಿ. ಎಸ್ಪಿ ಡಿವೈಎಸ್ಪಿ ಅವರಿಗೆ ತನಿಖೆ ತೀವ್ರಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ವಿಶ್ವಾಸ್ ವೈದ್ಯ ಶಾಸಕ
Quote - ಶಾಲೆಯ ಕುರಿತು ಗ್ರಾಮಸ್ಥರಲ್ಲಿ ಧ್ವೇಷ ಭಾವನೆ ಇಲ್ಲ. ಆದರೂ ಕಿಡಿಗೇಡಿಗಳು ವಿಷ ಬೆರೆಸಿದ್ದಾರೆ. ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಸ್.ಬಿ. ಗೋರಿನಾಯ್ಕ ಮುಖ್ಯ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.