ADVERTISEMENT

ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 13:50 IST
Last Updated 12 ಜನವರಿ 2020, 13:50 IST
ಅಥಣಿಯ ಮೋಟಗಿ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಸಾಧಕರನ್ನು ಸತ್ಕರಿಸಲಾಯಿತು
ಅಥಣಿಯ ಮೋಟಗಿ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಸಾಧಕರನ್ನು ಸತ್ಕರಿಸಲಾಯಿತು   

ಅಥಣಿ: ಇಲ್ಲಿನ ಮೋಟಗಿ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆಬಿದ್ದಿತು.

ಸಮಾರೋಪ ಸಮಾರಂಭದಲ್ಲಿ ಲಿಂ.ಚನ್ನಬಸವ ಶಿವಯೋಗಿಗಳ 96ನೇ ಸ್ಮರಣೋತ್ಸವ ನಡೆಯಿತು. ಭಾವೈಕ್ಯ ಬೆಳದಿಂಗಳ ಕಾರ್ಯಕ್ರಮದ ಬಳಿಕ 6 ಜನ ಸಾಧಕರನ್ನು ಸತ್ಕರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಇಲ್ಲಿನ ಗಚ್ಚಿನಮಠ ಶಿವಬಸವ ಸ್ವಾಮೀಜಿ, ‘ಬಸವಾದಿ ಶರಣದ ವಚನಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಕೊಂಡರೆ ವಿಶ್ವದಲ್ಲಿನ ಎಲ್ಲ ಸಮಸ್ಯೆಗಳೂ ದೂರವಾಗುತ್ತವೆ. ಶರಣರ ವಚನಗಳು ವಿಶ್ವ ಶಾಂತಿಗೆ ಟಾನಿಕ್ ಇದ್ದಂತೆ. ಜಾತಿ, ವರ್ಣರಹಿತ ಸಮಾಜ ನಿರ್ಮಾಣ ಮಾಡಲು, ಸ್ತ್ರೀ ಸ್ವಾತಂತ್ರ್ಯಕ್ಕೆ ಮಹತ್ವ ನೀಡಿದ ಕಾಯಕ ತತ್ವಕ್ಕೆ ಮಹತ್ವ ನೀಡಿ ಆರ್ಥಿಕ ಸಮಾನತೆ ತಂದ ಕೀರ್ತಿ ಶರಣರಿಗೆ ಸಲ್ಲುತ್ತದೆ’ ಎಂದರು.

ADVERTISEMENT

ವಿವಿಧ ಕ್ಷೇತ್ರದ ಸಾಧನೆಗಾಗಿ ಎ.ಸಿ. ದೇಸಾಯಿ. ಡಾ.ಎ.ಎ. ಪಾಂಗಿ, ಆನಂದ ಹಂಜಿ, ರಾಜೇಂದ್ರ ದೇಸಾಯಿ, ಶಶೀಧರ ಘೀವಾರಿ, ರಾಜಶೇಖರ ಮೆಣಸಿನಕಾಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಮುಕ್ತಾಯಿ ಮಹಾವೈಭವ’ ನಾಟಕ ಪ್ರದರ್ಶನ ನಡೆಯಿತು.‌ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.