
ಖಾನಾಪುರ: ಸಮೀಪದ ಲೈಲಾ ಶುಗರ್ಸ್ ಆವರಣದಲ್ಲಿ ಬುಧವಾರ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆಯ ಅಧ್ಯಕ್ಷ, ಶಾಸಕ ವಿಠ್ಠಲ ಹಲಗೇಕರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮೊದಲ ಕಂತಿನ ರೂಪದಲ್ಲಿ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಮತ್ತು ಎರಡನೇ ಕಂತಿನಲ್ಲಿ ಸರ್ಕಾರದ ಎಫ್.ಆರ್.ಪಿ ನಿಗದಿಪಡಿಸಿದ ದರ ನೀಡಲಾಗುವುದು’ ಎಂದು ಘೋಷಿಸಿದರು.
‘ಈ ಬಾರಿ ಕಬ್ಬು ಕಟಾವಿಗಾಗಿ ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಿಂದ 400ಕ್ಕೂ ಹೆಚ್ಚು ತಂಡಗಳನ್ನು ಕರೆಸಲಾಗುತ್ತದೆ. ಎಲ್ಲ ರೈತರ ಹೊಲಗಳಿಗೆ ಈ ತಂಡಗಳು ತೆರಳಿ ಕಬ್ಬು ಕಟಾವು ಮಾಡಲಿವೆ. ರೈತರು ಯಾವುದಕ್ಕೂ ಅವಸರಪಡಬಾರದು’ ಎಂದರು.
ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ತೋಪಿನಕಟ್ಟಿ ಗ್ರುಪ್ ನ ಮುಖಂಡರಾದ ಚಾಂಗಪ್ಪ ನಿಲಜಕರ, ತುಕಾರಾಮ ಹುಂದ್ರೆ, ವಿಠ್ಠಲ ಕರಂಬಳಕರ, ಬಿಜೆಪಿ ಮುಖಂಡ ಮಲ್ಲಪ್ಪ ಮಾರಿಹಾಳ, ರೈತ ಮುಖಂಡ ಮಲ್ಲಪ್ಪ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.