ಘಟಪ್ರಭಾ: ಸಂಗನಕೇರಿ ಕ್ರಾಸ್ ಬಳಿ ದ್ವಿಚಕ್ರವಾಹನ, ಕ್ರೂಸರ್ ಹಾಗೂ ಟ್ರ್ಯಾಕ್ಟರ್ ನಡುವೆ ಶನಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತರಾದರು.
ಹಿಡಕಲ್ ಗ್ರಾಮದ ಐದು ತಿಂಗಳ ಮಗು ದೃಷ್ಟಿ, ಸದಾಶಿವ ದುರ್ಗಪ್ಪ ಗಾಣಿಗೇರ (35) ಹಾಗೂ ಸಕ್ಕುಬಾಯಿ (30) ಮೃತರು.
ಹಿಡಕಲ್ನಿಂದ ಗೋಕಾಕಕ್ಕೆ ಹೊರಟಾಗ ಈ ಅವಘಡ ಸಂಭವಿಸಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.