ADVERTISEMENT

ವಚನಾಮೃತ: ನಂಬಿಕೆಯಿಂದ ದೇವರನ್ನು ಆರಾಧಿಸಿ

ಡಾ.ಅಲ್ಲಮಪ್ರಭು ಸ್ವಾಮೀಜಿ
Published 25 ಆಗಸ್ಟ್ 2021, 7:38 IST
Last Updated 25 ಆಗಸ್ಟ್ 2021, 7:38 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ತೊತ್ತಿಂಗೆ ಬಲ್ಲಹನೊಲಿದಡೆ ಪದವಿಯ ಮಾಡದೆ ಮಾಣ್ಬನೆ?

ಜೇಡರ ದಾಸಯ್ಯಂಗೊಲಿದಾತ, ಮತ್ತೊಬ್ಬ ದೇವನೆ, ಅಯ್ಯಾ?

ಮಾದರ ಚನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ,

ADVERTISEMENT

ತೆಲುಗ ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ, ಅಯ್ಯಾ?

ತನ್ನತ್ತ ಮಾಡುವ ಕೂಡಲಸಂಗಮದೇವ.

ಭಗವಂತನ ಅನುಗ್ರಹವು ಪ್ರಾಪ್ತವಾಗಬೇಕಾದರೆ ನಮ್ಮಲ್ಲಿ ಸಮರ್ಪಣಾ ಮನೋಭಾವ ಇರಬೇಕಾಗುತ್ತದೆ. ನಿಷ್ಠೆಯಿಂದ ಸೇವೆ ಮಾಡುವ ಸೇವಕನಿಗೆ ರಾಜನಾದವನು ಯಾವ ಪದವಿಯನ್ನಾದರೂ ಕರುಣಿಸುತ್ತಾನೆ. ಭಕ್ತನಿಗೆ ಭಗವಂತನೇ ರಾಜನು. ಭಕ್ತಿಯಿಂದ ಭಗವಂತನ ಸೇವೆ ಮಾಡಿದರೆ ಯಾವುದೇ ಕೊರತೆ ಆಗದಂತೆ ಆತನು ನೋಡಿಕೊಳ್ಳುತ್ತಾನೆ. ಎಲ್ಲ ಶಿವಶರಣರಿಗೆ ಒಲಿದಾತ ಒಬ್ಬನೇ ದೇವರು. ಜೇಡರ ದಾಸಿಮಯ್ಯ, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ತೆಲುಗು ಜೊಮ್ಮಯ್ಯ ಇವರೆಲ್ಲರಿಗೂ ಒಲಿದಾತನೇ ತನಗೂ ಒಲಿಯುತ್ತಾನೆ ಎಂಬ ಅಚಲ ನಂಬಿಕೆ ಬಸವಣ್ಣನವರಿಗೆ ಇದೆ. ಅಂತಹ ನಂಬಿಕೆಯನ್ನು ಇಟ್ಟುಕೊಂಡು ಭಗವಂತನನ್ನು ಆರಾಧಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.