ADVERTISEMENT

‘ಸಮಗ್ರ ತ್ಯಾಜ್ಯ ನಿರ್ವಹಣೆ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 13:21 IST
Last Updated 4 ನವೆಂಬರ್ 2020, 13:21 IST
ಬೆಳಗಾವಿಯ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜಿನಲ್ಲಿ ಆರಂಭವಾದ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು
ಬೆಳಗಾವಿಯ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜಿನಲ್ಲಿ ಆರಂಭವಾದ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು   

ಬೆಳಗಾವಿ: ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜಿನಲ್ಲಿ ದೆಹಲಿಯ ಎ.ಐ.ಸಿ.ಟಿ.ಇ. ಹಾಗೂ ಐ.ಎಸ್.ಟಿ.ಇ. ಪ್ರಾಯೋಜಕತ್ವದಲ್ಲಿ ‘ಸಮಗ್ರ ತ್ಯಾಜ್ಯ ನಿರ್ವಹಣೆ’ ಕುರಿತು ಬುಧವಾರ ಕಾರ್ಯಾಗಾರ ನಡೆಯಿತು.

ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಿದ್ದ ಒಂದು ವಾರದ ಕಾರ್ಯಾಗಾರವನ್ನು ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ ಉದ್ಘಾಟಿಸಿ, ‘ಭವಿಷ್ಯದಲ್ಲಿ ತ್ಯಾಜ್ಯ ನಿರ್ವಹಣೆಯು ಬಹು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಇಂತಹ ಕಾರ್ಯಾಗಾರದಲ್ಲಿ ಅವುಗಳ ನಿರ್ವಹಣೆಯ ಬಗ್ಗೆ ವಿಚಾರಣೆ ನಡೆಯುತ್ತಿರುವುದು ಶ್ಲಾಘನೀಯ. ಎಂಜಿನಿಯರಿಂಗ್ ಬೋಧಕರು ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ, ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ ಮಾತನಾಡಿದರು. ದೆಹಲಿಯ ಎಐಸಿಟಿಇ ನಿರ್ದೇಶಕ ಡಾ.ಪ್ರತಾಪ ಸಿಂಗ ದೇಸಾಯಿ ಹಾಗೂ ಐ.ಎಸ್.ಟಿ.ಇ.ಯ ಪ್ರೊ.ವಿಜಯ ವೈದ್ಯ, ಪ್ರೊ.ಸುಬ್ಬರಾಯ, ಪ್ರೊ.ನಿಂಗಾರೆಡ್ಡಿ, ಪ್ರೊ.ಅರವಿಂದ ಜಾಧವ, ಡಾ.ಸಂಜಯ ಪೂಜಾರಿ, ಪ್ರೊ.ಸಾಗರ ಬಿರ್ಜೆ ಪಾಲ್ಗೊಂಡಿದ್ದರು.

ADVERTISEMENT

ಬೆಂಗಳೂರಿನ ಪ್ರಕೃತಿ ಪರಿಸರ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಎನ್. ರಮೇಶಕುಮಾರ, ಜೈನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಸಂಗಮಿ, ಕಾರ್ಯಾಗಾರದ ಸಂಯೋಜನಾಧಿಕಾರಿ ಡಾ.ಬಿ.ಟಿ. ಸುರೇಶ ಬಾಬು ಮಾತನಾಡಿದರು.

ಪ್ರೊ.ಅಮರ ಬ್ಯಾಕೋಡಿ, ಪ್ರೊ.ನೂರಅಹ್ಮದ ಹೊಸಮನಿ, ಪ್ರೊ.ವಿನೋದ ಸುಳೆಭಾವಿ, ಪ್ರೊ.ರವಿ ತಿಳಗಂಜಿ, ಪ್ರೊ.ಗೋಪಾಲ ಸುರಪಲ್ಲಿ, ಪ್ರೊ.ಮೆಹಬೂಬ ಹಂಚಿನಾಳ, ಪ್ರೊ.ಪುಟ್ಟವ್ವ ಪಮ್ಮಾರ, ಪ್ರೊ.ತೇಜಸ್ವಿನಿ ಜೋತಾವರ, ಪ್ರೊ.ವೈಶಾಲಿ ಖಾನಾಪೂರ ಇದ್ದರು.

ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರೊ.ಎಂ.ವಿ. ಕಂಠಿ ಸ್ವಾಗತಿಸಿದರು. ಪ್ರೊ.ತೇಜಸ್ವಿನಿ ಜೋತಾವರ ನಿರೂಪಿಸಿದರು. ಪ್ರೊ.ವಿನೋದ ಸುಳೇಭಾವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.