ಬೆಳಗಾವಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಾಗೂ ಮದ್ರಾಸ್ ರೆಜಿಮೆಂಟ್ನ 263ನೇ ರೈಸಿಂಗ್ ಡೇ ಅಂಗವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಮ್ಮಿಕೊಂಡಿರುವ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿರುವವರು ತಾಲ್ಲೂಕಿನ ಪಂತನಗರದ ಮೂಲಕ ಪ್ರಯಾಣಿಸಿದರು.
ನೆ.17ರಂದು ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್ ಉದ್ಘಾಟಿಸಿದ ರ್ಯಾಲಿಯ ನೇತೃತ್ವವನ್ನು ಮೇಜರ್ ಹರೀಶ್ ಬೋರಾ ವಹಿಸಿದ್ದಾರೆ.
ತಂಡವನ್ನು ಬೆಳಗಾವಿಯ ನೋಡಲ್ ಅಧಿಕಾರಿ ಸಣ್ಣಯಲ್ಲಪ್ಪ ತಳವಾರ, ಕ್ಯಾಪ್ಟನ್ ಡಿ.ಬಿ. ರಜಪೂತ್, ಕಾಡಪ್ಪ ಸಂಸುದ್ದಿ ಹಾಗೂ ಪಂತ ನಗರದ ಗ್ರಾಮಸ್ಥರು ಹಾಗೂ ಜಿಲ್ಲೆಯ ಮಾಜಿ ಸೈನಿಕರು ಸ್ವಾಗತಿಸಿದರು.
ಇದೇ ವೇಳೆ, ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.