ಬೆಳಗಾವಿ: ಸೈಟ್ ಕೊಡಿಸುವುದಾಗಿ ₹ 2 ಲಕ್ಷ ಪಡೆದು ವಂಚಿಸಿದ ಆರೋಪದ ಮೇಲೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಪತಿ ಪ್ರಶಾಂತ ಐಹೊಳೆ ಅವರನ್ನು ಅಥಣಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
‘ಮಹಾಲಕ್ಷ್ಮಿ ಎಸ್ಟೇಟ್ಸ್ ಕಂಪೆನಿ ನಡೆಸುತ್ತಿದ್ದಪ್ರಶಾಂತ ಐಹೊಳೆ ಅವರಿಗೆ ಅಥಣಿಯಲ್ಲಿ ಸೈಟ್ ಕೊಡಿಸುವಂತೆ ₹ 2 ಲಕ್ಷ ಹಣ ನೀಡಿದ್ದೆ. ಆದರೆ, ಸೈಟ್ ನೀಡದೆ ವಂಚಿಸಿದ್ದಾರೆ’ ಎಂದು ಸಂಜಯ ಸಂಕಪಲ್ಕರ್ ದೂರು ನೀಡಿದ್ದರು.
‘ಸಂಜಯ ಅವರ ದೂರಿನ ಮೇರೆಗೆ ಸೂಕ್ತ ಪ್ರಶಾಂತ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.