ADVERTISEMENT

ಅನೂಪ್‌ ಜಲೋಟಗೆ ‘ಸಂಗೀತ ರತ್ನಾಕರ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:27 IST
Last Updated 15 ಡಿಸೆಂಬರ್ 2017, 19:27 IST
ಅನೂಪ್‌ ಜಲೋಟ
ಅನೂಪ್‌ ಜಲೋಟ   

ಬೆಂಗಳೂರು: ಸುರಭಾರತೀ ಸಂಸ್ಕೃತ ಮತ್ತು ಸಂಸ್ಕೃತಿ ಪ್ರತಿಷ್ಠಾನ ನೀಡುವ ‘ಸಂಗೀತ ರತ್ನಾಕರ’ ಪ್ರಶಸ್ತಿಗೆ ಭಜನಾ ಸಾಮ್ರಾಟ ಅನೂಪ್‌ ಜಲೋಟ ಭಾಜನರಾಗಿದ್ದಾರೆ.

ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ನಗರದ ಎಚ್ಆರ್‌ಬಿಆರ್‌ ಬಡಾವಣೆಯ 1ನೇ ಹಂತದ 9ನೇ ‘ಸಿ’ ಮುಖ್ಯರಸ್ತೆಯಲ್ಲಿರುವ ಭಾರತೀ ತೀರ್ಥ ಸಭಾ ಮಂಟಪದಲ್ಲಿ ಇದೇ 17ರಿಂದ ಜನವರಿ 14ರವರೆಗೆ ‘ಮಾರ್ಗಶೀರ್ಷೋತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ. 17ರಂದು ಸಂಜೆ 5.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಂದು ಜಲೋಟ ಹಾಗೂ ಅವರ ತಂಡದಿಂದ ಸಂಗೀತ ಕಛೇರಿ ನಡೆಯಲಿದೆ.

ADVERTISEMENT

ಒಂದು ತಿಂಗಳವರೆಗೆ ಪ್ರತಿದಿನ ಸಂಜೆ 6.30ರಿಂದ 8.45ರವರೆಗೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಹೆಸರಾಂತ ಸಂಗೀತಗಾರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.