ADVERTISEMENT

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 20:02 IST
Last Updated 5 ಮಾರ್ಚ್ 2014, 20:02 IST

ಬೆಂಗಳೂರು: ಯಡಿಯೂರು ವಾರ್ಡ್ ನ ನೆಟ್ಟಕಲ್ಲಪ್ಪ ವೃತ್ತ­ದಿಂದ ೨೩ನೇ ಅಡ್ಡರಸ್ತೆ ವರೆಗಿನ ೨ ಕಿ.ಮೀ.ಗಳಷ್ಟು ಉದ್ದದ ಚರಂಡಿ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮ­ಗಾರಿಗೆ ಬುಧವಾರ ವಿಧಾನಸಭೆ ವಿರೋಧಪಕ್ಷದ ಉಪ­ನಾಯಕ ಆರ್‌. ಅಶೋಕ ಚಾಲನೆ ನೀಡಿದರು.

ಬಿಬಿಎಂಪಿಯ ಬೃಹತ್ ಕಾಮಗಾರಿಗಳ ಇಲಾಖೆಯಿಂದ ಈ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ₨ 3.5 ಕೋಟಿ ಅನುದಾನ ದೊರೆತಿದೆ. ರಸ್ತೆಯನ್ನು ಅಭಿವೃದ್ಧಿ­ಪಡಿ­ಸುವ ಕಾಮಗಾರಿಯೂ ಯೋಜನೆಯಲ್ಲಿ ಸೇರಿದೆ. ‘ಕಾಲಮಿತಿ­ಯಲ್ಲಿ ಕಾಮಗಾರಿಗಳನ್ನು ಪೂರೈಸುವ ಮೂಲಕ ಸಾರ್ವಜನಿ­ಕ­­ರಿಗೆ ಹೆಚ್ಚಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಅಶೋಕ, ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಮೇಯರ್‌ ಬಿ.ಎಸ್. ಸತ್ಯನಾರಾಯಣ, ಪಾಲಿಕೆ ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಹೆಚ್.­ ಬಸವರಾಜು, ಸ್ಥಳೀಯ ಸದಸ್ಯ ಎನ್‌.ಆರ್‌. ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT