ADVERTISEMENT

ಆಲಮಟ್ಟಿ: ನಗರದ ಯುವಕನ ಸಾವು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಆಲಮಟ್ಟಿ: ಇಲ್ಲಿಯ ಅಣೆಕಟ್ಟೆ ಮುಂಭಾಗದ ಕೃಷ್ಣಾ ಸೇತುವೆ ಸಮೀಪ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಮಂಗಳವಾರ ಪತ್ತೆಯಾಗಿದೆ.

ಮೃತನನ್ನು ಬೆಂಗಳೂರು ಆವಲಹಳ್ಳಿಯ ಪಿ.ಎನ್. ಪ್ರಮೋದ (29) ಎಂದು ಗುರುತಿಸಲಾಗಿದೆ. ಪ್ರಮೋದ ಧರಿಸಿದ್ದ ಪ್ಯಾಂಟ್‌ನಲ್ಲಿ ಗುರುತಿನ ಚೀಟಿಯ ಮೂಲಕ ಹೆಸರು ಪತ್ತೆ ಮಾಡಲಾಗಿದೆ.

ರೈಲ್ವೆ ಸೇತುವೆ ಬಳಿ ಶವ ಪತ್ತೆಯಾಗಿದ್ದರಿಂದ ರೈಲಿನಿಂದ ಬಿದ್ದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ ನದಿ ದಡದಲ್ಲಿ ತೇಲುತ್ತಿದ್ದ ಶವವನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ.
ಆಲಮಟ್ಟಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.