ಬೆಂಗಳೂರು: ’ನಿಮ್ಹಾನ್ಸ್ನಲ್ಲಿ ಇರಬೇಕಾದವರು ಬೀದಿಯಲ್ಲಿ ನಿಂತು ಮಾಡುವ ಆರೋಪಕ್ಕೆ ಉತ್ತರ ಕೊಡಲ್ಲ’ ಎಂದು ಬಿಜೆಪಿ ನಗರ ಜಿಲ್ಲೆ ವಕ್ತಾರ ಎನ್.ಆರ್.ರಮೇಶ್ ಆರೋಪಕ್ಕೆ ಸಚಿವ ಜಾರ್ಜ್ ಪ್ರತಿಕ್ರಿಯಿಸಿದರು.
ವಿಧಾನಸೌಧದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ಏನು ಅವ್ಯವಹಾರ, ಅದರ ಕುರಿತು ದಾಖಲೆಗಳು ಇವೆಯೇ, ದಾಖಲೆ ಓದಿ ಪ್ರಶ್ನಿಸಿ. ಅದೇನೇ ಇದ್ದರೂ ತನಿಖೆ ಆಗಲಿ’ ಎಂದರು.
‘ಮೆಂಟಲ್ ಆಸ್ಪತ್ರೆಗೆ ಹೋಗಬೇಕಾದವರ ಆರೋಪಕ್ಕೆ ಉತ್ತರ ನೀಡುವುದಿಲ್ಲ. ಜವಾಬ್ದಾರಿಯುತವಾಗಿ ಯಾರಾದರು ಆರೋಪ ಮಾಡಿದರೆ ಉತ್ತರ ನೀಡುವೆ. ಎನ್.ಆರ್.ರಮೇಶ್ ಅವರಿಗೆ ಮೆಂಟಲ್ ಆಸ್ಪತ್ರೆಗೆ ಹೋಗೋಕೆ ಹೇಳಿ’ ಎಂದು ಸಚಿವ ಜಾರ್ಜ್ ಗುಡುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.