ADVERTISEMENT

ಎಸ್.ಬಂಗಾರಪ್ಪ ವಿಚಾರ ವೇದಿಕೆ ಅಸ್ತಿತ್ವಕ್ಕೆ, ಅ.26ಕ್ಕೆ ಹುಟ್ಟುಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಭಿಮಾನಿಗಳು ಗುರುವಾರ ನಗರದಲ್ಲಿ ಸಭೆ ಸೇರಿ ಮೈಸೂರಿನ ಪಿ.ಗೋವಿಂದರಾಜ್ ಅವರ ಅಧ್ಯಕ್ಷತೆಯಲ್ಲಿ `ಎಸ್. ಬಂಗಾರಪ್ಪ ವಿಚಾರ ವೇದಿಕೆ~ಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ವೇದಿಕೆ ವತಿಯಿಂದ ಎಸ್. ಬಂಗಾರಪ್ಪನವರ 80 ನೇ ಹುಟ್ಟುಹಬ್ಬವನ್ನು ಅ. 26 ರಂದು ಸಂಜೆ 5.30 ಕ್ಕೆ ನಗರದ ಅರಮನೆ ಮೈದಾನದಲ್ಲಿ ಆಚರಿಸಲು ಅವರು ನಿರ್ಧರಿಸಿದ್ದಾರೆ.

ವೇದಿಕೆಯ ಪದಾಧಿಕಾರಿಗಳ ವಿವರ ಇಲ್ಲಿದೆ: ವೇಣುಗೋಪಾಲ ನಾಯಕ್, ಕೆ.ಎಸ್. ಭಾಸ್ಕರ ಶೆಟ್ಟಿ, ಎಂ.ಕೆ.ಸುಹೈಲ್, ಎಂ. ವೆಂಕಟೇಶ (ಉಪಾಧ್ಯಕ್ಷರು). ತುಕ್ಕಪ್ಪ (ಪ್ರಧಾನ ಕಾರ್ಯದರ್ಶಿ). ಅನಂತಯ್ಯ (ಖಜಾಂಚಿ),  ಎನ್.ಎಸ್. ಹಿರೇಮಠ್, ಎಲ್.ಪೋತೇಗೌಡ, ಲಕ್ಷ್ಮಿ ವೆಂಕಟೇಶ್, ನಾಗರಾಜರೆಡ್ಡಿ, ಸುನೀಲ್ ಅಡಿಗ, ಗೋವಿಂದರಾಜ್, ಎಚ್.ಜಗದೀಶ್, ಶಮಂತ್, ರಾಜು, ಡಾ.ಪ್ರಭಾಕರ, ಮಹಂತೇಶ, ಮೋಹನ್, ಚಂಗಪ್ಪ, ಡಿ.ಆರ್.ರಾಜು, ಶೇರ್‌ಯಾರ್ ಖಾನ್, ಅಂಜನಪ್ಪ, ರಾಜಶೇಖರಗೌಡ, ಕೊಂಡೇಗೌಡ (ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.