ADVERTISEMENT

ಕಂಗಾಲಾದ ಕಾರ್ಮಿಕರು–ಪ್ರತಿಭಟನೆ

ಬಾಂಬೆ ರೇಯಾನ್ಸ್ ಫ್ಯಾಷನ್ ಕಾರ್ಖಾನೆಗೆ ದಿಢೀರ್‌ ಬೀಗ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:31 IST
Last Updated 17 ಮಾರ್ಚ್ 2014, 19:31 IST
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ಸ್ ಫ್ಯಾಷನ್ ಕಾರ್ಖಾನೆಗೆ ಬೀಗ  ಹಾಕಿರುವ ಕ್ರಮ ಖಂಡಿಸಿ ನೂರಾರು ಕಾರ್ಮಿಕರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ಸ್ ಫ್ಯಾಷನ್ ಕಾರ್ಖಾನೆಗೆ ಬೀಗ ಹಾಕಿರುವ ಕ್ರಮ ಖಂಡಿಸಿ ನೂರಾರು ಕಾರ್ಮಿಕರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ನಗರದ ಹೊರ­ವಲಯದ ಕೈಗಾರಿಕಾ ಪ್ರದೇಶ­ದಲ್ಲಿ­ರುವ ಬಾಂಬೆ ರೇಯಾನ್ಸ್ ಫ್ಯಾಷನ್ ಲಿ, (ಪ್ರೊಸೆಸಿಂಗ್ ಘಟಕ)ಕ್ಕೆ ಸೋಮ­ವಾರ ಬೆಳಗ್ಗೆ ಏಕಾಏಕಿ ಬೀಗ ಹಾಕಲಾ­ಗಿದೆ. ಇದರಿಂದ ಕಂಗಾಲಾದ ಕಾರ್ಮಿ­ಕರು ಕಾರ್ಖಾನೆಯ ಕ್ರಮ ಖಂಡಿಸಿ ಕಾರ್ಖಾ­ನೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಕಂಪೆನಿಯವರು ಕಾರ್ಖಾನೆ ಗೇಟ್‌ನ ಸೂಚನಾ ಫಲಕದಲ್ಲಿನ ಪತ್ರದಲ್ಲಿ ಬೀಗ ಹಾಕಲು ಏನು ಕಾರಣ ಎಂಬುದನ್ನು ವಿವರಿಸಿದೆ.
‘ಸ್ಪರ್ಧಾತ್ಮಕ ಯುಗದಲ್ಲಿ ಬೇಡಿಕೆ ಕುಸಿತವಾಗಿರುವುದು, ಕಾರ್ಮಿಕರ ಅಸಹಕಾರ, ಯಂತ್ರಗಳನ್ನು ಹಾನಿ­ಮಾಡಿ­­ರುವುದು, ಕಾರ್ಮಿಕರ ಬೋನಸ್ ಬೇಡಿಕೆ ಹಾಗೂ ಕಂಪೆನಿಯ ಜೊತೆ ಅಸಹಕಾರಗಳಿಂದ ಕಂಪೆನಿ ನಷ್ಟ­ಕ್ಕೊಳ­ಗಾಗಿ, ಗ್ರಾಹಕರಿಗೆ ಸರಿಯಾದ ಸಮ­ಯದಲ್ಲಿ ವಸ್ತುಗಳನ್ನು ನೀಡಲು ಕಂಪೆನಿಗೆ ಸಾಧ್ಯವಾಗಿಲ್ಲ.

ಈ ಬಗ್ಗೆ ಕಂಪೆನಿ ಅನಿವಾರ್ಯವಾಗಿ ನ್ಯಾಯಾ­ಲಯ­ದಲ್ಲಿ ದಾವೆ ಹೂಡಿದೆ. ಕಂಪೆನಿಯ ಯಂತ್ರೋಪಕರಣ ಹಾಗೂ ಕಾರ್ಖಾ­ನೆಯ ಹಿತ ಕಾಪಾಡುವ ದಿಸೆಯಲ್ಲಿ ಮಾ.೧೭­ರಂದು ಬೆಳಗಿನಿಂದ ಕಾರ್ಖಾ­ನೆಗೆ ಬೀಗ ಮುದ್ರೆ ಹಾಕಲಾಗಿದೆ’ ಎಂದು ಇ ಸೂಚನಾ ಪತ್ರದಲ್ಲಿ ತಿಳಿಸ­ಲಾ­ಗಿದೆ.

ಪ್ರತಿಭಟನಾನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಬಾಂಬೆ ರೇಯಾನ್ಸ್ ಫ್ಯಾಷನ್ ಲಿ.ನ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಬೀಗ ಮುದ್ರೆ ಹಾಕಲು ಕಾರ್ಖಾನೆ ನೀಡಿರುವ ಕಾರಣ­ಗಳು ಸತ್ಯಕ್ಕೆ ದೂರವಾಗಿವೆ ಎಂದು ಆರೋ­ಪಿ­ಸಿದರು.

ಹಗಲು ರಾತ್ರಿ ಶ್ರಮಪಟ್ಟು ದುಡಿ­ಯುವ ಕಾರ್ಮಿಕರು ನ್ಯಾಯಬದ್ಧವಾಗಿ ತಮಗೆ ಸಿಗಬೇಕಾದ ವೇತನವನ್ನು ಕೇಳಿ­ರುವುದಕ್ಕಾಗಿ ಕಾನೂನು ಬಾಹಿರವಾಗಿ ಬೀಗಮುದ್ರೆ ಹಾಕಲಾಗಿದೆ. ಕಳೆದ ಒಂದು ವರ್ಷಗಳಿಂದ ಕಾರ್ಖಾನೆ ಆಡಳಿತ ಮಂಡಲಿ ಹಾಗೂ ಕಾರ್ಮಿಕರ ನಡುವೆ ಈ ವೇತನ ಹೆಚ್ಚಳದ ಕುರಿತಾಗಿ ಸಂಧಾನ ನಡೆಯುತ್ತಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಸಹ ದಾಖಲಾಗಿದೆ. ೨೦೧2–-೧೩ರಲ್ಲಿ ಕಾರ್ಮಿಕರಿಗೆ ಕಡಿಮೆ ವೇತನ ನೀಡಿದ್ದರಿಂದ ಕಾರ್ಖಾನೆಯ ವಿರುದ್ದ ೭೬ ಲಕ್ಷ ರೂಗಳ ಕ್ಲೇಮ್ ದಾಖಲಾಗಿದೆ.

ಕಾರ್ಖಾನೆ ಯಾವುದೇ ಕಾರಣದಿಂಲೂ ನಷ್ಟ ಅನುಭವಿಸಿಲ್ಲ. ಯುಗಾದಿ ಹಬ್ಬಕ್ಕೆ ಮುಂಗಡ ನೀಡುವುದಾಗಿ ಹೇಳಿರುವ ಕಂಪೆನಿ ವೇತನ ಏರಿಕೆ ಕುರಿತಂತೆ ಯಾವೊಂದು ತೀರ್ಮಾನ ಕೈಗೊಳ್ಳದೇ ರಾತ್ರೋರಾತ್ರಿ ಬೀಗ ಜಡಿದು, ಕಾರ್ಖಾನೆಯ ೫೨೦ ಕಾರ್ಮಿಕರನ್ನು ಬೀದಿಪಾಲು ಮಾಡಿದೆ. ಇದು ಪರೋಕ್ಷವಾಗಿ ಇತರ ಘಟಕಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಾರ್ಖಾನೆಯ ಈ ಕ್ರಮ ಖಂಡನೀಯ. ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬಾಂಬೆ ರೇಯಾನ್ಸ್ ಫ್ಯಾಷನ್ ಲಿ.ನ ಕಾರ್ಮಿಕ ಘಟಕದ ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಪಾಪೇಗೌಡ ಹಾಗೂ  ಮುಖಂಡ­ರಾದ ಮಂಜುನಾಥ್ ರುದ್ರೇಶ್ ಸೇರಿ ನೂರಾರು ಕಾರ್ಮಿಕರು   ಈ ವೇಳೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT