ಬೆಂಗಳೂರು: ನಗರದ ವೆಂಕಟಸ್ವಾಮಿ ಗಾರ್ಡನ್ ಬಳಿಯ ನರಸಿಂಹಯ್ಯ ಹಾಗೂ ಯಶೋಧಮ್ಮ ದಂಪತಿಯ ಎರಡು ವರ್ಷದ ಮಗು ಮಾಸ್ಟರ್ ಚಂದನ್ ಕರುಳುಬೇನೆಯಿಂದ ಮೃತಪಟ್ಟಿದೆ.
ಮಗುವಿನ ಹೆತ್ತವರಿಗೆ ಮಹಾನಗರ ಪಾಲಿಕೆ ವತಿಯಿಂದ ಮೇಯರ್ ಶಾರದಮ್ಮ ಶುಕ್ರವಾರ ರೂ ಒಂದು ಲಕ್ಷದ ಪರಿಹಾರ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.
ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಂದನ್ ಚಿಕಿತ್ಸೆಗೆ ಸ್ಪಂದಿಸದೆ ಮಾರ್ಚ್ 29ರಂದು ಮೃತಪಟ್ಟಿದ್ದ.
ಬಡ ಕುಟುಂಬಕ್ಕೆ ಸಾಂತ್ವನ ನೀಡಲು ಚೆಕ್ ಹಸ್ತಾಂತರಿಸಲಾಯಿತು ಎಂದು ಬಿಬಿಎಂಪಿ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.