ಬೆಂಗಳೂರು:‘ನ್ಯಾಯಮೂರ್ತಿ ಲೋಯಾ ಅವರದು ಸಹಜ ಸಾವು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣದ ಮೂಲಕ ಅಮಿತ್ ಶಾ ಹೆಸರಿಗೆ ಮಸಿ ಬಳಿ ಯುವ ಕಾಂಗ್ರೆಸ್ ಪ್ರಯತ್ನ ವಿಫಲವಾ ಗಿದೆ’ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿದರು.
‘ರಾಜಕೀಯ ಕಾರಣಗಳಿಗೆಲೋಯಾ ಹತ್ಯೆಯಾಗಿದೆ ಎಂದು ಬಿಂಬಿಸಲಾಯಿತು. ಈ ಪ್ರಕರಣ ಮುಂದಿಟ್ಟು ಶಾ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಯಿತು. ತನಿಖೆ ನಡೆಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಕೋರ್ಟ್ ವಜಾಗೊ ಳಿಸಿದ್ದು, ಕಾಂಗ್ರೆಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ದೇಶದ ಮುಂದೆ ಕ್ಷಮೆ ಕೇಳ ಬೇಕು’ ಎಂದೂ ಅವರು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.