ADVERTISEMENT

ಕುಲಪತಿ ಪ್ರಭುದೇವ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:55 IST
Last Updated 1 ಮಾರ್ಚ್ 2012, 19:55 IST

ಬೆಂಗಳೂರು: `ಕುಲಪತಿ ಎನ್.ಪ್ರಭುದೇವ್  ಕಿರುಕುಳ ನೀಡುತ್ತಿರುವುದರಿಂದ ನನ್ನ ತಂದೆಗೆ ಗುರುವಾರ ಹೃದಯಾಘಾತವಾಗಿದೆ~ ಎಂದು ವಿವಿಯ ಮುಖ್ಯ ಎಂಜಿನಿಯರ್ ಎನ್.ಪುಟ್ಟಸ್ವಾಮಿ ಅವರ ಮಗ  ಪಿ.ಮಾಕೇಶ್ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾರೆ.

`ನನ್ನ ತಂದೆ ಪರಿಶಿಷ್ಟ ಜಾತಿಯವರು ಎಂದು ಅವರ ಮೇಲೆ ವಿನಾ ಕಾರಣ ಆರೋಪ ಮಾಡಿ ಅವರ ಅಧಿಕಾರ ಕಿತ್ತುಕೊಂಡು ನನ್ನ ತಂದೆಗೆ ಮಾನಸಿಕವಾಗಿ ಆಘಾತ ಉಂಟು ಮಾಡಿದ್ದಾರೆ. ಅವರ ಪ್ರಾಣ ಹಾನಿಯಾದರೆ ಕುಲಪತಿ ಅವರೇ ಕಾರಣ~ ಎಂದಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.