ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ಗಳಲ್ಲಿ ಇದೇ ಏಪ್ರಿಲ್ 30ರೊಳಗೆ ಮೂರು ಬಾರಿ ಪ್ರಯಾಣಿಸಿದರೆ, ನಾಲ್ಕನೆಯ ಟಿಕೆಟ್ಗೆ ಶೇಕಡ 30ರಷ್ಟು ರಿಯಾಯಿತಿ ನೀಡುವುದಾಗಿ ನಿಗಮ ಘೋಷಿಸಿದೆ.
ಈ ಸೌಲಭ್ಯವನ್ನು ಬಳಸಿಕೊಳ್ಳಲು ಪ್ರಯಾಣಿಕರು ಮೊಬೈಲ್ ಅಥವಾ ಇಂಟರ್ನೆಟ್ ಮೂಲಕ ಟಿಕೆಟ್ ಕಾಯ್ದಿರಿಸಬೇಕು. ಮೂರು ಬಾರಿಯ ನಂತರ ನಾಲ್ಕನೆ ಸಲ ಟಿಕೆಟ್ ಕಾಯ್ದಿರಿಸುವಾಗ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆಯಲಿದೆ. ಏಪ್ರಿಲ್ 30ರ ನಂತರ ಟಿಕೆಟ್ ಕಾಯ್ದಿರಿಸುವವರಿಗೆ ಈ ಸೌಲಭ್ಯ ದೊರೆಯುವುದಿಲ್ಲ.
ನಿಗಮವು ಈ ಕೊಡುಗೆಗೆ `ಪ್ರಯಾಣೋತ್ಸವ~ ಎಂದು ಹೆಸರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.