ಬೆಂಗಳೂರು: ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನಕಲಾ ಸಂಘ ನಗರದ ಲಾಲ್ಬಾಗ್ನಲ್ಲಿ ಬುಧವಾರದಿಂದ ಇದೇ 26ರವರೆಗೆ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ್, ಗೃಹ ಸಚಿವ ಆರ್.ಅಶೋಕ, ಮೇಯರ್ ಎಸ್.ಕೆ.ನಟರಾಜ್, ಸಂಸದ ಅನಂತಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಲಾಲ್ಬಾಗ್ನ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಪುಷ್ಪಕಲಾ ಸ್ಪರ್ಧೆಗಳ ಪ್ರದರ್ಶನ 20ರಿಂದ ಆರಂಭವಾಗಲಿದೆ.ವಾರದ ದಿನಗಳಲ್ಲಿ ವಯಸ್ಕರಿಗೆ ರೂ. 30 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದ್ದು ರಜಾದಿನ 23 ಹಾಗೂ 26ರಂದು ರೂ. 40, ಮಕ್ಕಳಿಗೆ ರೂ.10, ಕಾರು ಮತ್ತು ಒಬ್ಬರಿಗೆ ರೂ 40 ವಿಶೇಷ ದಿನಗಳಲ್ಲಿ 50, ಕಾರು ಮತ್ತು ಎಂಟು ಜನರಿಗೆ ರೂ. 250, ವಿಶೇಷ ದಿನಗಳಲ್ಲಿ ರೂ.330 ನಿಗದಿಪಡಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.