ಬೆಂಗಳೂರು: `ಗಾಂಧೀಜಿಯ ಆದರ್ಶಗಳನ್ನು ಅಳವಡಿಸಿಕೊಂಡು ಜನರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಬೇಕು~ ಎಂದು ಬಸವನಗುಡಿ ಗಿರಿನಗರ ನಾಗರಿಕರ ವೇದಿಕೆಯ ವಿ.ಎಸ್.ಮೋಹನ್ಕುಮಾರ್ ಹೇಳಿದರು.
ಬಸವನಗುಡಿ ಗಿರಿನಗರ ನಾಗರಿಕರ ವೇದಿಕೆಯು ಇತ್ತೀಚೆಗೆ ನಗರದಲ್ಲಿ ಗಾಂಧೀಜಿಯ ಜನ್ಮ ದಿನಾಚರಣೆ ಪ್ರಯುಕ್ತ ಗಾಂಧಿಯವರ ಭಾವಚಿತ್ರ ಮೆರವಣಿಗೆ ಹಾಗೂ ಕಸದ ನ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮನೆ-ಮನೆಗೆ ತೆರಳಿ ಒಣಕಸ ಮತ್ತು ಹಸಿಕಸದ ಬೇರ್ಪಡಿಸುವಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು. ತ್ಯಾಜ್ಯ ವಸ್ತು ವಿಂಗಡಣೆ ನಗರದಲ್ಲಿ ಮುಖ್ಯವಾಗಿದೆ. ತ್ಯಾಜ್ಯದಿಂದ ಆಗುವ ಪರಿಣಾಮಗಳ ಬಗ್ಗೆ ಕೂಡ ವಿವರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.