ADVERTISEMENT

ಚಿರತೆ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:18 IST
Last Updated 28 ಫೆಬ್ರುವರಿ 2018, 20:18 IST
ಅರಸೀಕೆರೆ ನಗರದ ಹೊರಭಾಗದ ಸುಬ್ರಮಣ್ಯ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿರುವ ಚಿರತೆಯ ಕಳೇಬರ
ಅರಸೀಕೆರೆ ನಗರದ ಹೊರಭಾಗದ ಸುಬ್ರಮಣ್ಯ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿರುವ ಚಿರತೆಯ ಕಳೇಬರ   

ಅರಸೀಕೆರೆ: ನಗರದ ಹೊರಭಾಗದ ಸುಬ್ರಮಣ್ಯ ಬೆಟ್ಟದ ತಪ್ಪಲಿನಲ್ಲಿ ಬುಧವಾರ ಚಿರತೆಯ ಕಳೇಬರ ಪತ್ತೆಯಾಗಿದೆ.

ಚಿರತೆಯ ಕಳೇಬರವನ್ನು ಬೀದಿ ನಾಯಿಗಳು ಎಳೆದಾಡುತ್ತಿರುವುದನ್ನು ನೋಡಿದವರು ಗಮನಿಸಿ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ವಲಯ ಅರಣ್ಯಾಧಿಕಾರಿ ರಾಜಾನಾಯಕ್‌ ಪರಿಶೀಲಿಸಿದರು.

‘ಚಿರತೆ ಮೃತಪಟ್ಟು ವಾರ ಕಳೆದಿದೆ. ಗಿಡಗಳ ಸಂದಿಯಲ್ಲಿ ಬಿದ್ದಿರುವುದರಿಂದ ಯಾರ ಗಮನಕ್ಕೂ ಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ಗೊತ್ತಾಗಲಿದೆ’ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.