ADVERTISEMENT

‘ಟಿಪ್ಪು ಜಯಂತಿ ಆಚರಣೆ ಶತಸಿದ್ಧ: ಸಾಧ್ಯವಿದ್ದರೆ ತಡೆಯಿರಿ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 20:26 IST
Last Updated 26 ಅಕ್ಟೋಬರ್ 2017, 20:26 IST
‘ಟಿಪ್ಪು ಜಯಂತಿ ಆಚರಣೆ ಶತಸಿದ್ಧ: ಸಾಧ್ಯವಿದ್ದರೆ ತಡೆಯಿರಿ’
‘ಟಿಪ್ಪು ಜಯಂತಿ ಆಚರಣೆ ಶತಸಿದ್ಧ: ಸಾಧ್ಯವಿದ್ದರೆ ತಡೆಯಿರಿ’   

ಬೆಂಗಳೂರು: ‘ಬಹುಜನ ಅಂಬೇಡ್ಕರ್ ಸಂಘದ ವತಿಯಿಂದ ಕೆ.ಆರ್. ಪುರ ಕ್ಷೇತ್ರದ ಇಸ್ಲಾಂಪುರದಲ್ಲಿ ಟಿಪ್ಪುಜಯಂತಿಯನ್ನು ನವೆಂಬರ್ 10ರಂದು ವಿಜೃಂಭಣೆಯಿಂದ ಆಚರಿಸುತ್ತೇವೆ. ಸಾಧ್ಯವಿದ್ದರೆ, ಬಿಜೆಪಿ ಸಂಸದರು ಅಲ್ಲಿಗೆ ಬಂದು ತಡೆಯಲಿ’ ಎಂದು ಸಂಘದ ಅಧ್ಯಕ್ಷೆ ಎನ್.ಸಿ. ಜ್ಯೋತಿ ಸವಾಲು ಹಾಕಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ಜಯಂತಿ ಹೆಸರಿನಲ್ಲಿ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ, ಸಂಸದರಾದ ಪ್ರತಾಪ್‌ ಸಿಂಹ ಮತ್ತು ಶೋಭಾ ಕರಂದ್ಲಾಜೆ ಅವರು ಸಮಾಜದಲ್ಲಿ ಶಾಂತಿ ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದರು.

‘ಕೆಲ ಬಿಜೆಪಿ ನಾಯಕರು ದೇಶದಲ್ಲಿನ 35 ಕೋಟಿ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಟಿಪ್ಪುವಿನ ಇತಿಹಾಸ ತಿಳಿಯದ ಅವರು ಚುನಾವಣಾ ರಾಜಕೀಯದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.