ADVERTISEMENT

ಡಿಕ್ಕಿ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:34 IST
Last Updated 19 ಜುಲೈ 2013, 19:34 IST

ಬೆಂಗಳೂರು: ಪೀಣ್ಯ ಮೇಲ್ಸೇತುವೆಯಲ್ಲಿ ಕೆಟ್ಟು ನಿಂತಿದ್ದ ಟೆಂಪೊಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಮಧುಸೂದನ್ (23) ಎಂಬ ಪ್ರಯಾಣಿಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮೂಲತಃ ದಾವಣಗೆರೆಯವರಾದ ಮಧುಸೂದನ್, ನಗರದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.  ಶುಕ್ರವಾರ ರಾತ್ರಿ ಬಸ್‌ನಲ್ಲಿ ಊರಿಗೆ ಹೋಗುತ್ತಿದ್ದರು.

10.15ರ ಸುಮಾರಿಗೆ ಪೀಣ್ಯದ ಮೇಲ್ಸೇತುವೆಗೆ ಬಂದ ಬಸ್, ಕೆಟ್ಟು ನಿಂತಿದ್ದ ಟೆಂಪೊಗೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಬಸ್‌ನ ಮುಂಭಾಗದ ಗಾಜು ಪುಡಿಪುಡಿಯಾಯಿತು. ಈ ವೇಳೆ ಮುಂದಿನ ಸೀಟಿನಲ್ಲೇ ಕುಳಿತಿದ್ದ ಮಧುಸೂದನ್, ಹೊರಗೆ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು, ಸಾವನ್ನಪ್ಪಿದ್ದಾರೆ.

ಬಸ್ ಚಾಲಕ ದಯಾನಂದ್ ಕಾಲು ಮುರಿದಿದ್ದು, ಟೆಂಪೊ ಚಾಲಕ ಲಕ್ಷ್ಮೀಪತಿಗೂ ಗಾಯಗಳಾಗಿವೆ. `ಮಳೆ ಸುರಿಯುತ್ತ್ದ್ದಿದರಿಂದ ಟೆಂಪೊ ಕಾಣಲಿಲ್ಲ' ಎಂದು ಬಸ್ ಚಾಲಕ ಹೇಳಿಕೆ ಕೊಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.