ADVERTISEMENT

ದೈವಜ್ಞ ಸಮಾಜಕ್ಕೆ ವಿಶೇಷ ಅನುದಾನ

ರಾಮಲಿಂಗಾ ರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 20:27 IST
Last Updated 30 ಡಿಸೆಂಬರ್ 2017, 20:27 IST
ದೈವಜ್ಞ ಸಮಾಜಕ್ಕೆ ವಿಶೇಷ ಅನುದಾನ
ದೈವಜ್ಞ ಸಮಾಜಕ್ಕೆ ವಿಶೇಷ ಅನುದಾನ   

ಬೆಂಗಳೂರು: ‘ದೈವಜ್ಞ ಸಮಾಜದ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ ವಿಶೇಷ ಅನುದಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸುತ್ತೇನೆ’ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.

ಬೆಂಗಳೂರು ದೈವಜ್ಞ ಯುವಕ ಸಂಘವು ಶನಿವಾರ ಹಮ್ಮಿಕೊಂಡಿದ್ದ ದೈವಜ್ಞ ಯುವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೈವಜ್ಞ ಸಮಾಜಕ್ಕೂ ನಿವೇಶನ ನೀಡಲಾಗಿದೆ. ಆ ಜಾಗವನ್ನು ವಿದ್ಯಾರ್ಥಿನಿಲಯಕ್ಕೆ ಅಥವಾ  ಸಂಘದ ಕಟ್ಟಡ ನಿರ್ಮಿಸಲು ಬಳಸಿಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT