ADVERTISEMENT

ಧ್ರುವ ಸರ್ಜಾ ಕಟೌಟ್‌: ದೂರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 18:48 IST
Last Updated 15 ಅಕ್ಟೋಬರ್ 2018, 18:48 IST
ಧ್ರುವ ಸರ್ಜಾ ಕಟೌಟ್‌ ಚಿತ್ರಕೃಪೆ: ನ್ಯೂಸ್‌ಮಿನಿಟ್‌
ಧ್ರುವ ಸರ್ಜಾ ಕಟೌಟ್‌ ಚಿತ್ರಕೃಪೆ: ನ್ಯೂಸ್‌ಮಿನಿಟ್‌   

ಬೆಂಗಳೂರು: ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ಕಟೌಟ್‌ ಹಾಕಿದ್ದ ಅಪರಿಚಿತ ವ್ಯಕ್ತಿಯೊಬ್ಬರ ವಿರುದ್ಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಧಿಕೃತ ಕಟೌಟ್‌ ಎಂದು ಗುರುತಿಸಿದ್ದ ಬಿಬಿಎಂಪಿ ಬನಶಂಕರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ತಾರಾನಾಥ್ ಅಕ್ಟೋಬರ್‌ 13ರಂದು ದೂರು ದಾಖಲಿಸಿದ್ದಾರೆ. ಅಕ್ಟೋಬರ್ 6ರಂದು ಧ್ರುವಸರ್ಜಾ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದರು. ಇದರ ಅಂಗವಾಗಿ ಅಭಿಮಾನಿಯೊಬ್ಬರು ಕೆ.ಆರ್.ರಸ್ತೆ ಮತ್ತು ಶಾಸ್ತ್ರಿ ನಗರದಲ್ಲಿ ಅನಧಿಕೃತವಾಗಿ ನಟನ 25 ಅಡಿ ಕಟೌಟ್‌ ಹಾಕಿದ್ದರು.

ಧ್ರುವ ಅವರ ಹುಟ್ಟುಹಬ್ಬ ಮುಗಿದು ವಾರ ಕಳೆದರೂ ಅದನ್ನು ತೆರವುಗೊಳಿಸಿರಲಿಲ್ಲ. ಕಟೌಟ್‌ನಿಂದ ಪಾದಚಾರಿಗಳಿಗೆ ಅಡಚಣೆ ಉಂಟಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುವ ಜಾಹೀರಾತು ಫಲಕ, ಕಟೌಟ್‌ ಅಳವಡಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಆಗಸ್ಟ್‌ನಲ್ಲಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಆದರೂ ಕಟೌಟ್ ಹಾಕಿದ್ದರು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾರಾನಾಥ್ ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.