ADVERTISEMENT

ನಗರದಲ್ಲಿ ಮಳೆ ರಸ್ತೆಯಲ್ಲೆಲ್ಲ ನೀರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 20:26 IST
Last Updated 5 ಜುಲೈ 2017, 20:26 IST
ನಗರದಲ್ಲಿ ಮಳೆ ರಸ್ತೆಯಲ್ಲೆಲ್ಲ ನೀರು
ನಗರದಲ್ಲಿ ಮಳೆ ರಸ್ತೆಯಲ್ಲೆಲ್ಲ ನೀರು   

ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಗಾಳಿ ಸಹಿತ ಮಳೆ ಸುರಿಯಿತು.  ಕೆಲ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಚಲಾಯಿಸಲು ಸವಾರರು ಪರದಾಡಿದರು.

ರಾಜಾಜಿನಗರ, ರಾಜರಾಜೇಶ್ವರಿನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ಬಸವನಗುಡಿ, ಶಿವಾಜಿನಗರ, ಎಂ.ಜಿ.ರಸ್ತೆ, ಕೋರಮಂಗಲದಲ್ಲಿ ಮಳೆಯಾಗಿದೆ.

ಕ್ವೀನ್ಸ್ ರಸ್ತೆಯ ಅಕ್ಕ–ಪಕ್ಕದ ಕಾಲುವೆಗಳ ನೀರು ತುಂಬಿಹರಿಯಿತು. ಅದರಿಂದ ಭಾಗಶಃ ರಸ್ತೆಯಲ್ಲೇ ನೀರು ಹರಿದುಹೋಯಿತು. ಅದರಲ್ಲೇ ಸವಾರರು ವಾಹನ ಚಲಾಯಿಸಿಕೊಂಡು ಹೋದರು. ನೃಪತುಂಗ ರಸ್ತೆ, ಉಪ್ಪಾರಪೇಟೆ, ಮೆಜೆಸ್ಟಿಕ್‌, ಶೇಷಾದ್ರಿಪುರ, ಓಕಳಿಪುರ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.

ADVERTISEMENT

ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಅರ್ಧ ಗಂಟೆ ಬಿಸಿಲು ಕಾಣಿಸಿಕೊಂಡು, ನಂತರ ಮೋಡ ಕವಿದ ಸ್ಥಿತಿಯೇ ಮುಂದುವರಿಯಿತು.

‘ಸಾಧಾರಣ ಮಳೆಯಾಗಿದ್ದರಿಂದ ಹಾನಿಯ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.
ಹವಾಮಾನ ಇಲಾಖೆಯ ಅಧಿಕಾರಿಗಳು ಮಾತನಾಡಿ, ‘ಕೊಟ್ಟಿಗೇಪಾಳ್ಯ,  ಹೆರೋಹಳ್ಳಿ ಹಾಗೂ ಸುತ್ತಮುತ್ತ 1 ಮಿ.ಮೀ. ಮಳೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.