ADVERTISEMENT

ನಟಿ ಜಯಂತಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:37 IST
Last Updated 6 ಏಪ್ರಿಲ್ 2018, 19:37 IST
ವಿಕ್ರಂ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟಿ ಜಯಂತಿ (ಬಲ) ಮಾತನಾಡಿದರು. ಡಾ. ಸತೀಶ್‌ ಅವರು ಚಿತ್ರದಲ್ಲಿ ಇದ್ದಾರೆ
ವಿಕ್ರಂ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟಿ ಜಯಂತಿ (ಬಲ) ಮಾತನಾಡಿದರು. ಡಾ. ಸತೀಶ್‌ ಅವರು ಚಿತ್ರದಲ್ಲಿ ಇದ್ದಾರೆ   

ಬೆಂಗಳೂರು: ಆಸ್ತಮಾದಿಂದಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟಿ ಜಯಂತಿ ಅವರು ಗುಣಮುಖರಾಗಿದ್ದಾರೆ.

ಜಯಂತಿ ಅವರ ಮಗ ಕೃಷ್ಣಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಅಮ್ಮನಿಗೆ ವೈದ್ಯರು ಕಟ್ಟುನಿಟ್ಟಾದ ಡಯಟ್‌ ಅನುಸರಿಸಲು ಹೇಳಿದ್ದಾರೆ. 10 ದಿನಗಳ ನಂತರ ಮತ್ತೆ ಪರೀಕ್ಷೆಗಳನ್ನು ಮಾಡಲಾಗುತ್ತದೆ’ ಎಂದು ಹೇಳಿದರು.

‘ನನಗೋಸ್ಕರ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದು ಜಯಂತಿ ಅವರು ಭಾವುಕರಾಗಿ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.